<p><strong>ಕುಣಿಗಲ್</strong>: ಪಟ್ಟಣದ 19ನೇ ವಾರ್ಡ್ನಲ್ಲಿ ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ವಿದ್ಯುತ್ ಚಿತಾಗಾರದ ಕಟ್ಟಡ ನಿರ್ಮಾಣವಾಗಿ ವರ್ಷವಾದರೂ ಅನುದಾನದ ಕೊರತೆಯಿಂದ ಕಾರ್ಯಾರಂಭವಾಗಿಲ್ಲ.</p>.<p>ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಕುಂಬಾರಗುಂಡಿ ಸ್ಮಶಾನದಲ್ಲಿ ಜನರ ತೀವ್ರ ವಿರೋಧದ ನಡುವೆಯೂ ಕಟ್ಟಡ ನಿರ್ಮಿಸಲಾಗಿದೆ.</p>.<p>ಶವಸುಡಲು ಬಳಸುವ ವಿದ್ಯುತ್ ಯಂತ್ರಕ್ಕೆ ಅನುದಾನದ ಕೊರತೆಯಿಂದ ಕಟ್ಟಡ ಕಾರ್ಯ ಆರಂಭವಾಗಿಲ್ಲ. ಕಟ್ಟಡ ಸ್ಮಶಾನದಲ್ಲಿರುವುದರಿಂದ ಯಾರು ಗಮನಹರಿಸದೆ ಶಿಥಿಲಾವಸ್ಥೆ ತಲುಪುತ್ತಿದೆ.ದುಷ್ಕರ್ಮಿಗಳು ಈಗಾಗಲೇ ಕಟ್ಟಡದ ಕಿಟಕಿ ಗಾಜುಗಳನ್ನು ನಾಶ ಮಾಡಿದ್ದಾರೆ.</p>.<p>ವಿದ್ಯುತ್ ಚಿತಾಗಾರ ಪಟ್ಟಣದ ನಾಗರಿಕರ ಬಹುದಿನದ ಬೇಡಿಕೆ. ಕಾಮಗಾರಿ ಪೂರ್ಣಗೊಂಡು ಇನ್ನೇನೂ ಶವಸಂಸ್ಕಾರಕ್ಕೆ ಲಭ್ಯವಾಗುತ್ತದೆ ಎಂದು ಆಶಾಭಾವನೆ ಹೊಂದಿದ್ದ ಜನರಿಗೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ನಿರಾಸೆ ಆಗಿದೆ ಎನ್ನುತ್ತಾರೆ ಕುಣಿಗಲ್ ಅಭಿವೃದ್ಧಿ ಫೋರಂನ ರವಿಚಂದ್ರ.</p>.<p>‘ಪಟ್ಟಣದಲ್ಲಿ ಸ್ಮಶಾನಗಳು ಒತ್ತುವರಿ ಆಗುತ್ತಿವೆ. ಮುಂದಿನ ದಿನಗಳಲ್ಲಿ ಶವಸಂಸ್ಕಾರಕ್ಕೆ ಜಾಗವಿಲ್ಲದಂತೆ ಆಗಬಹುದು. ಪುರಸಭೆಯವರು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಮುಕ್ತಿಧಾಮಗಳನ್ನು ಸಂರಕ್ಷಿಸಿ, ಸುಂದರ ಪರಿಸರ ನಿರ್ಮಿಸಬೇಕು. ಪರಿಸರ ರಕ್ಷಣೆ ದೃಷ್ಟಿಯಿಂದ ವಿದ್ಯುತ್ ಚಿತಾಗಾರ ಅಗತ್ಯವಾಗಿದೆ. ಸಂಬಂಧಪಟ್ಟವರು ಗಮನ ಹರಿಸಬೇಕು’ ಎಂದು ನಿವೃತ್ತ ಔಷಧ ಅಧಿಕಾರಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.</p>.<p>ಶಾಸಕ ಡಾ.ರಂಗನಾಥ್ ಪ್ರತಿಕ್ರಿಯಿಸಿ, ‘ಅತ್ಯಾಧುನಿಕ ವಿದ್ಯುತ್ ಚಿತಾಗಾರವನ್ನು ತಾಲ್ಲೂಕಿನ ಜನರಿಗೆ ಸಮರ್ಪಿಸಬೇಕು ಎನ್ನುವುದು ಸಂಸದ ಡಿ.ಕೆ.ಸುರೇಶ್ ಆಶಯವಾಗಿದೆ. ಕೇಂದ್ರ ಸರ್ಕಾರ ಸಂಸದರ ಅನುದಾನ ಕಡಿತಗೊಳಿಸಿದೆ. ವಿದ್ಯುತ್ ಯಂತ್ರ ಅಳವಡಿಕೆ ಸೇರಿದಂತೆ ವಿವಿಧ ವ್ಯವಸ್ಥೆಗೆ ₹85 ಲಕ್ಷ ಅಗತ್ಯವಿದೆ. ಅನುದಾನ ಸದ್ಬಳಕೆ ಮಾಡಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದರು.</p>.<p><strong>ವರ್ಷಾಂತ್ಯಕ್ಕೆ ಆರಂಭ</strong><br />ಸಂಸದ ಡಿ.ಕೆ.ಸುರೇಶ್ ಅತ್ಯಾಧುನಿಕ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸೂಚನೆ ನೀಡಿದ್ದ ಮೇರೆಗೆ, ತಾಲ್ಲೂಕಿನಲ್ಲಿ ₹ 2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ವಿದ್ಯುತ್ ಯಂತ್ರ ಅಳವಡಿಕೆಗೆ ಸಂಸದರ ನಿಧಿಯಿಂದ ₹ 65 ಲಕ್ಷ ಮಂಜೂರಾತಿ ನಿರೀಕ್ಷೆಯಲ್ಲಿದ್ದು, ಶೀಘ್ರ ಯಂತ್ರ ಅಳವಡಿಸಲಾಗುವುದು. ವರ್ಷದ ಅಂತ್ಯದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ರಾಮನಗರ ಜಿಲ್ಲೆ ಯೋಜನಾ ನಿರ್ದೇಶಕ ಗೋವಿಂದರಾಜು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್</strong>: ಪಟ್ಟಣದ 19ನೇ ವಾರ್ಡ್ನಲ್ಲಿ ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ವಿದ್ಯುತ್ ಚಿತಾಗಾರದ ಕಟ್ಟಡ ನಿರ್ಮಾಣವಾಗಿ ವರ್ಷವಾದರೂ ಅನುದಾನದ ಕೊರತೆಯಿಂದ ಕಾರ್ಯಾರಂಭವಾಗಿಲ್ಲ.</p>.<p>ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಕುಂಬಾರಗುಂಡಿ ಸ್ಮಶಾನದಲ್ಲಿ ಜನರ ತೀವ್ರ ವಿರೋಧದ ನಡುವೆಯೂ ಕಟ್ಟಡ ನಿರ್ಮಿಸಲಾಗಿದೆ.</p>.<p>ಶವಸುಡಲು ಬಳಸುವ ವಿದ್ಯುತ್ ಯಂತ್ರಕ್ಕೆ ಅನುದಾನದ ಕೊರತೆಯಿಂದ ಕಟ್ಟಡ ಕಾರ್ಯ ಆರಂಭವಾಗಿಲ್ಲ. ಕಟ್ಟಡ ಸ್ಮಶಾನದಲ್ಲಿರುವುದರಿಂದ ಯಾರು ಗಮನಹರಿಸದೆ ಶಿಥಿಲಾವಸ್ಥೆ ತಲುಪುತ್ತಿದೆ.ದುಷ್ಕರ್ಮಿಗಳು ಈಗಾಗಲೇ ಕಟ್ಟಡದ ಕಿಟಕಿ ಗಾಜುಗಳನ್ನು ನಾಶ ಮಾಡಿದ್ದಾರೆ.</p>.<p>ವಿದ್ಯುತ್ ಚಿತಾಗಾರ ಪಟ್ಟಣದ ನಾಗರಿಕರ ಬಹುದಿನದ ಬೇಡಿಕೆ. ಕಾಮಗಾರಿ ಪೂರ್ಣಗೊಂಡು ಇನ್ನೇನೂ ಶವಸಂಸ್ಕಾರಕ್ಕೆ ಲಭ್ಯವಾಗುತ್ತದೆ ಎಂದು ಆಶಾಭಾವನೆ ಹೊಂದಿದ್ದ ಜನರಿಗೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ನಿರಾಸೆ ಆಗಿದೆ ಎನ್ನುತ್ತಾರೆ ಕುಣಿಗಲ್ ಅಭಿವೃದ್ಧಿ ಫೋರಂನ ರವಿಚಂದ್ರ.</p>.<p>‘ಪಟ್ಟಣದಲ್ಲಿ ಸ್ಮಶಾನಗಳು ಒತ್ತುವರಿ ಆಗುತ್ತಿವೆ. ಮುಂದಿನ ದಿನಗಳಲ್ಲಿ ಶವಸಂಸ್ಕಾರಕ್ಕೆ ಜಾಗವಿಲ್ಲದಂತೆ ಆಗಬಹುದು. ಪುರಸಭೆಯವರು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಮುಕ್ತಿಧಾಮಗಳನ್ನು ಸಂರಕ್ಷಿಸಿ, ಸುಂದರ ಪರಿಸರ ನಿರ್ಮಿಸಬೇಕು. ಪರಿಸರ ರಕ್ಷಣೆ ದೃಷ್ಟಿಯಿಂದ ವಿದ್ಯುತ್ ಚಿತಾಗಾರ ಅಗತ್ಯವಾಗಿದೆ. ಸಂಬಂಧಪಟ್ಟವರು ಗಮನ ಹರಿಸಬೇಕು’ ಎಂದು ನಿವೃತ್ತ ಔಷಧ ಅಧಿಕಾರಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.</p>.<p>ಶಾಸಕ ಡಾ.ರಂಗನಾಥ್ ಪ್ರತಿಕ್ರಿಯಿಸಿ, ‘ಅತ್ಯಾಧುನಿಕ ವಿದ್ಯುತ್ ಚಿತಾಗಾರವನ್ನು ತಾಲ್ಲೂಕಿನ ಜನರಿಗೆ ಸಮರ್ಪಿಸಬೇಕು ಎನ್ನುವುದು ಸಂಸದ ಡಿ.ಕೆ.ಸುರೇಶ್ ಆಶಯವಾಗಿದೆ. ಕೇಂದ್ರ ಸರ್ಕಾರ ಸಂಸದರ ಅನುದಾನ ಕಡಿತಗೊಳಿಸಿದೆ. ವಿದ್ಯುತ್ ಯಂತ್ರ ಅಳವಡಿಕೆ ಸೇರಿದಂತೆ ವಿವಿಧ ವ್ಯವಸ್ಥೆಗೆ ₹85 ಲಕ್ಷ ಅಗತ್ಯವಿದೆ. ಅನುದಾನ ಸದ್ಬಳಕೆ ಮಾಡಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದರು.</p>.<p><strong>ವರ್ಷಾಂತ್ಯಕ್ಕೆ ಆರಂಭ</strong><br />ಸಂಸದ ಡಿ.ಕೆ.ಸುರೇಶ್ ಅತ್ಯಾಧುನಿಕ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸೂಚನೆ ನೀಡಿದ್ದ ಮೇರೆಗೆ, ತಾಲ್ಲೂಕಿನಲ್ಲಿ ₹ 2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ವಿದ್ಯುತ್ ಯಂತ್ರ ಅಳವಡಿಕೆಗೆ ಸಂಸದರ ನಿಧಿಯಿಂದ ₹ 65 ಲಕ್ಷ ಮಂಜೂರಾತಿ ನಿರೀಕ್ಷೆಯಲ್ಲಿದ್ದು, ಶೀಘ್ರ ಯಂತ್ರ ಅಳವಡಿಸಲಾಗುವುದು. ವರ್ಷದ ಅಂತ್ಯದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ರಾಮನಗರ ಜಿಲ್ಲೆ ಯೋಜನಾ ನಿರ್ದೇಶಕ ಗೋವಿಂದರಾಜು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>