ಜಿಲ್ಲೆಯಲ್ಲಿ ಒಕ್ಕಲಿಗ ಮತದಾರರ ಸಂಖ್ಯೆ ಹೆಚ್ಚಿದೆ. ಕಳೆದ ಬಾರಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ವಿರುದ್ಧ ಅಪಪ್ರಚಾರ ನಡೆಸಿದ್ದರು. ಆದರೂ ಶೇ 47 ರಷ್ಟು ಜನ ಅವರಿಗೆ ಮತ ಹಾಕಿದ್ದರು. ಅದರಲ್ಲಿ ಶೇ 34 ರಷ್ಟು ಮತಗಳು ಜೆಡಿಎಸ್ ಮತದಾರರಿಂದ ಬಂದಿದೆ. ಈ ಬಾರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದರು.