ಮದಲಿಂಗನ ಗುಡ್ಡ ಹಚ್ಚಹಸಿರಿನ ತಾಣ, ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ. ಗುಡ್ಡ ಹತ್ತಿ ಪರಿಸರ ವೀಕ್ಷಿಸುವ ಜನರ ಸಂಖ್ಯೆ ಪ್ರತಿ ವಾರ ಹೆಚ್ಚುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಕೆಮ್ಮಣ್ಣಗುಂಡಿಯಂತಹ ಪ್ರದೇಶಗಳಿಗೆ ಹೋಗುವ ಜನರು ಇಲ್ಲಿನ ಹಚ್ಚ ಹಸಿರಿನ ಪರಿಸರ ಕಂಡು ಈ ಗುಡ್ಡಗಳತ್ತ ಧಾವಿಸುತ್ತಿದ್ದಾರೆ.