ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಮ್ಮನ ಜಾತ್ರೆಗೂ ಕೋವಿಡ್ ಭಯ

Last Updated 14 ಮಾರ್ಚ್ 2020, 11:08 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಕೋವಿಡ್ ಭಯ ಕಾಡುತ್ತಿದೆ. ಮಾ.20 ರವರೆಗೂ ಜಾತ್ರೆ ನಡೆಯಬೇಕಿತ್ತು.

ಆದರೆ ರಾಜ್ಯದಲ್ಲಿ ಕೋವಿಡ್ ಭೀತಿಯಿಂದ ರಾಜ್ಯ ಸರ್ಕಾರ ಸಾರ್ವಜನಿಕರ ಜಾತ್ರೆಗಳಿಗೆ ನಿರ್ಬಂಧ ಹೇರಿದೆ. ಜಾತ್ರೆ ಸ್ಥಗಿತಗೊಳ್ಳುತ್ತದೆಯೊ ಎಂಬ ಭೀತಿ ಜನರಲ್ಲಿ ಕಾಡತೊಡಗಿದೆ.

ಮಾ.18 ರಂದು ದೇವಿಯ ಬೆಳ್ಳಿ ಪಲ್ಲಕ್ಕಿ, 19 ರಂದು ಅಗ್ನಿಕೊಂಡಕ್ಕೆ ರಾಜ್ಯ ಹಾಗೂ ಆಂಧ್ರಪ್ರದೇಶದ ವಿವಿಧ ಕಡೆಗಳ ಸಾವಿರಾರು ಭಕ್ತರು ಪಾಲ್ಗೊಳ್ಳುವರು.

ಜಾತ್ರೆ ಪ್ರಾರಂಭವಾಗಿ ಮೂರು ದಿನಗಳು ಕಳೆದಿವೆ. ದೇವಿಗೆ ಆರತಿ ಸೇವೆ ಮಾಡದಿದ್ದರೆ ನಮಗೆ ತೊಂದರೆ ಆಗತ್ತದೆ ಎಂಬ ಆತಂಕ ಮಹಿಳೆಯರಲ್ಲಿದೆ.

ಜಾತ್ರಾ ಮಹೋತ್ಸವಕ್ಕೆ ಮನೆಗಳಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಜನರು ನೆಂಟರಿಷ್ಟರು, ಮಿತ್ರರಿಗೆ ಜಾತ್ರೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT