ಕೃಷ್ಣಯ್ಯ, ಅವರ ಪತ್ನಿ ದಯಲಕ್ಷ್ಮಮ್ಮ ಮತ್ತು ಕೃಷ್ಣಯ್ಯ ಅವರ ತಾಯಿ ಕೆಂಪಮ್ಮ ಅವರು ತೋಟಕ್ಕೆ ತೆರಳಿದ್ದರು. ಆ ದಿನ ಮಧ್ಯಾಹ್ನ 12 ಗಂಟೆಗೆ ಕೃಷ್ಣಯ್ಯ ಅವರ ತಾಯಿ ಮನೆಗೆ ಊಟಕ್ಕೆ ಬಂದು ಮತ್ತೆ ತೋಟಕ್ಕೆ ಹೋಗಿದ್ದರು. ಮನೆಯ ಬೀಗ ಕೀಯನ್ನು ಮನೆಯ ಮುಂಭಾಗದ ವಿದ್ಯುತ್ ಮೀಟರ್ ಬೋರ್ಡ್ ಬಳಿ ಇಟ್ಟು ಹೋಗಿದ್ದರು. ಮಧ್ಯಾಹ್ನ 1.15ಕ್ಕೆ ಕೃಷ್ಣಯ್ಯ ಮತ್ತು ಅವರ ಪತ್ನಿ ಮನೆಗೆ ಬಂದಾಗ ಮನೆ ಬೀಗ ತೆರೆದಿದ್ದು, ಒಳ ಹೋಗಿ ನೋಡಿದಾಗಿ ಚಿನ್ನಾಭರಣ ಕಳ್ಳತನವಾಗಿದ್ದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.