ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಪಿಎಸ್ಐ ಅಧಿಕಾರಿಗಳ ದುಂಡಾ ವರ್ತನೆ ಖಂಡಿಸಿ ರೈತರ ಮೇಲೆ ಯಾವುದೇ ಕಾನೂನಾತ್ಮಕವಾಗಿ ಪರಿಶೀಲಿಸದೆ ಬಜರಂಗದಳದವರು ಮಾತೇ ಮುಖ್ಯವಾಗಿದೆಂದು ಪೊಲೀಸ್ ಅಧಿಕಾರಿಗಳ ದುರಾಡಳಿತವನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದರು. ನಂತರ ಎಸ್ಪಿ, ಡಿವೈಎಸ್ಪಿ ಅವರಿಗೆ ಕರೆ ಮಾಡಿ ನಡೆದಿರುವ ವಿಷಯವನ್ನು ತಿಳಿಸಿ ಈ ಕೂಡಲೇ ನಮ್ಮ ರೈತರನ್ನು ಮತ್ತು ರಾಸುಗಳನ್ನು ಬಿಡಬೇಕು. ರೈತ ವಿರೋಧಿ ಪೊಲೀಸ್ ಅಧಿಕಾರಿಯನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು. ನಂತರ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ರೈತರು ಮತ್ತು ರಾಸುಗಳನ್ನು ಬಿಡಲಾಯಿತು.