<p><strong>ತಿಪಟೂರು:</strong> ರಾಜ್ಯದಾದ್ಯಂತ ಸಂಚಾರ ಮಾಡುತ್ತಿರುವ ನಂದಿ ರಥ ಯಾತ್ರೆಗೆ ತಿಪಟೂರು ನಗರದಲ್ಲಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು.</p>.<p>ನಗರದ ಕೆಂಪಮ್ಮ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ನಗರದ ಗುರುಕುಲ ಮಠದ ಆವರಣದ ವೇದಿಕೆ ಕಾರ್ಯಕ್ರಮದವರೆಗೂ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿ, ಗೋವುಗಳಿಗೆ ಆರತಿ ಬೆಳಗಿ ನಮನ ಸಲ್ಲಿಸಲಾಯಿತು.</p>.<p>ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೇಶದ ಸಂಸ್ಕೃತಿ ಉಳಿಯಬೇಕಾದರೆ ದೇಶಿಯ ಗೋವುಗಳ ಸಂರಕ್ಷಣೆ ಮಾಡಬೇಕಾದ ಅನಿವಾರ್ಯ ಇದೆ. ಗೋವಿಗೂ ಹಾಗೂ ದೇಶದ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ ಎಂದರು.</p>.<p>ಶಿವನ ದೇವಸ್ಥಾನಕ್ಕೆ ಹೊದರೆ ಮೊದಲು ನಂದಿಯನ್ನು ಕಂಡು ದೇವಾಲಯದ ಒಳಗೆ ಹೋಗಬೇಕಾಗಿತ್ತು. ಗ್ರಾಮೀಣ ಭಾಗದಲ್ಲಿ ಎತ್ತು ಇಲ್ಲದವನಿಗೆ ಎದೆ ಇಲ್ಲ ಎಂಬ ಹೆಸರಿತ್ತು. ದೇಶಿ ಪದ್ಧತಿಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಪರಿಚಯಿಸಬೇಕಾಗಿದೆ ಎಂದರು.</p>.<p>ತುಮಕೂರು ವಿಭಾಗ ಗೋ ಸೇವಾ ಸಂಯೋಜಕ ಪ್ರಾಣೇಶ್ಜೀ ಮಾತನಾಡಿ, ದೇಶೀಯ ಗೋವುಗಳು ದೇಶದ ಸಂಪತ್ತು. ಅವುಗಳನ್ನು ಸಂರಕ್ಷಿಸಿ ಪೋಷಿಸುವುದು ಕರ್ತವ್ಯ ಎಂದರು.</p>.<p>ಮಾಜಿ ಸಚಿವ ಬಿ.ಸಿ.ನಾಗೇಶ್, ಡಾ.ಶ್ರೀಧರ್, ಜನಜಾಗೃತಿ ವೇದಿಕೆಯ ಸದಸ್ಯ ತರಕಾರಿ ಗಂಗಾಧರ್, ಓಹಿಲಾ ಗಂಗಾಧರ್, ವಿನಯ್ ಮಡೇನೂರು, ಉಮೇಶ್ ಗೊರಗೊಂಡನಹಳ್ಳಿ, ಎಚ್.ಎನ್ ಚಂದ್ರಶೇಖರ್, ಈಡೇನಹಳ್ಳಿ ನಾಗಭೂಷಣ್, ರವಿ ತಂಡಗ, ಶ್ಯಾಮ್ ಸುಂದರ್, ಜಗದೀಶ್, ಸತೀಶ್, ಗುಲಾಬಿ ಸುರೇಶ್, ಬಸವರಾಜು, ಹರ್ಷ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ರಾಜ್ಯದಾದ್ಯಂತ ಸಂಚಾರ ಮಾಡುತ್ತಿರುವ ನಂದಿ ರಥ ಯಾತ್ರೆಗೆ ತಿಪಟೂರು ನಗರದಲ್ಲಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು.</p>.<p>ನಗರದ ಕೆಂಪಮ್ಮ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ನಗರದ ಗುರುಕುಲ ಮಠದ ಆವರಣದ ವೇದಿಕೆ ಕಾರ್ಯಕ್ರಮದವರೆಗೂ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿ, ಗೋವುಗಳಿಗೆ ಆರತಿ ಬೆಳಗಿ ನಮನ ಸಲ್ಲಿಸಲಾಯಿತು.</p>.<p>ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೇಶದ ಸಂಸ್ಕೃತಿ ಉಳಿಯಬೇಕಾದರೆ ದೇಶಿಯ ಗೋವುಗಳ ಸಂರಕ್ಷಣೆ ಮಾಡಬೇಕಾದ ಅನಿವಾರ್ಯ ಇದೆ. ಗೋವಿಗೂ ಹಾಗೂ ದೇಶದ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ ಎಂದರು.</p>.<p>ಶಿವನ ದೇವಸ್ಥಾನಕ್ಕೆ ಹೊದರೆ ಮೊದಲು ನಂದಿಯನ್ನು ಕಂಡು ದೇವಾಲಯದ ಒಳಗೆ ಹೋಗಬೇಕಾಗಿತ್ತು. ಗ್ರಾಮೀಣ ಭಾಗದಲ್ಲಿ ಎತ್ತು ಇಲ್ಲದವನಿಗೆ ಎದೆ ಇಲ್ಲ ಎಂಬ ಹೆಸರಿತ್ತು. ದೇಶಿ ಪದ್ಧತಿಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಪರಿಚಯಿಸಬೇಕಾಗಿದೆ ಎಂದರು.</p>.<p>ತುಮಕೂರು ವಿಭಾಗ ಗೋ ಸೇವಾ ಸಂಯೋಜಕ ಪ್ರಾಣೇಶ್ಜೀ ಮಾತನಾಡಿ, ದೇಶೀಯ ಗೋವುಗಳು ದೇಶದ ಸಂಪತ್ತು. ಅವುಗಳನ್ನು ಸಂರಕ್ಷಿಸಿ ಪೋಷಿಸುವುದು ಕರ್ತವ್ಯ ಎಂದರು.</p>.<p>ಮಾಜಿ ಸಚಿವ ಬಿ.ಸಿ.ನಾಗೇಶ್, ಡಾ.ಶ್ರೀಧರ್, ಜನಜಾಗೃತಿ ವೇದಿಕೆಯ ಸದಸ್ಯ ತರಕಾರಿ ಗಂಗಾಧರ್, ಓಹಿಲಾ ಗಂಗಾಧರ್, ವಿನಯ್ ಮಡೇನೂರು, ಉಮೇಶ್ ಗೊರಗೊಂಡನಹಳ್ಳಿ, ಎಚ್.ಎನ್ ಚಂದ್ರಶೇಖರ್, ಈಡೇನಹಳ್ಳಿ ನಾಗಭೂಷಣ್, ರವಿ ತಂಡಗ, ಶ್ಯಾಮ್ ಸುಂದರ್, ಜಗದೀಶ್, ಸತೀಶ್, ಗುಲಾಬಿ ಸುರೇಶ್, ಬಸವರಾಜು, ಹರ್ಷ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>