ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಎ.ನಾರಾಯಣಸ್ವಾಮಿ ಕಾಡುಗೊಲ್ಲರ ಹಟ್ಟಿ ಪ್ರವೇಶ, ಜನರಿಂದ ಸ್ವಾಗತ

Last Updated 23 ಸೆಪ್ಟೆಂಬರ್ 2019, 7:30 IST
ಅಕ್ಷರ ಗಾತ್ರ

ಪಾವಗಡ(ತುಮಕೂರು): ಸಂಸದ ಎ.ನಾರಾಯಣಸ್ವಾಮಿ ಅವರು ಸೋಮವಾರ ಪೆಮ್ಮನಹಳ್ಳಿಯ ಕಾಡುಗೊಲ್ಲರ ಹಟ್ಟಿ ಪ್ರವೇಶ(ಪುರ ಪ್ರವೇಶ)ಮಾಡಿದರು. ಹಟ್ಟಿಗೆ ಬಂದ ಅವರನ್ನು ಜನ ಸ್ವಾಗತಿಸಿದರು.

ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಕೆಲವು ಸ್ಥಳೀಯರು ಕೈಜೋಡಿಸಿದ್ದಾರೆ.

ಹಟ್ಟಿಯ ಪ್ರವೇಶದಲ್ಲಿ ಸ್ವಾಗತಕ್ಕೆ ಬಾಳೆ ಕಂದುಗಳನ್ನು, ಮಾವಿನ ತೋರಣಗಳನ್ನು ಕಟ್ಟಲಾಗಿದೆ. ಸೇವಂತಿ ಹೂಗಳನ್ನು ಪೋಣಿಸಿ ಅಲ್ಲಲ್ಲಿನ ಹಾದಿಯನ್ನು ಅಲಂಕರಿಸಲಾಗಿತ್ತು.

ಸ್ವಾಗತಕ್ಕೆ ಸೇರಿದ್ದ ಜನ
ಸ್ವಾಗತಕ್ಕೆ ಸೇರಿದ್ದ ಜನ

ಸ್ಥಳೀಯ ಮುಖಂಡರು ಸ್ವಾಗತಕ್ಕೆ ಬ್ಯಾನರ್‌ಗಳನ್ನು ಕಟ್ಟಿದ್ದಾರೆ. ಹಟ್ಟಿಯ ಮಧ್ಯದಲ್ಲಿನ ಸಿದ್ದೇಶ್ವರ-ಈರಣ್ಣ- ತಿಮ್ಮಪ್ಪ ದೇವಾಲಯದ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಒಬ್ಬರು ಡಿವೈಎಸ್ಪಿ, 2 ಪಿಎಸ್ಐ, 2 ಎಸ್ಐ, 31 ಕಾನ್‌ಸ್ಟೆಬಲ್ ಒಳಗೊಂಡ ಪೊಲೀಸ್ ಪಡೆ ನಿಯೋಜಿಸಲಾಗಿದೆ.

ಪೂರ್ಣಕುಂಭ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು
ಪೂರ್ಣಕುಂಭ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT