ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನಲ್ಲಿ 300 ದಾಟಿತ ಮೃತರ ಸಂಖ್ಯೆ

ಬುಧವಾರ ಮತ್ತೆ 435 ಮಂದಿಗೆ ಕೊರೊನಾ ಸೋಂಕು
Last Updated 30 ಸೆಪ್ಟೆಂಬರ್ 2020, 16:38 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 301ಕ್ಕೆ ತಲುಪಿದೆ. ಅಲ್ಲದೆ ಬುಧವಾರ ಮತ್ತೆ 435 ಮಂದಿಗೆ ಸೋಂಕು ದೃಢವಾಗಿದ್ದು ಆರು ಮಂದಿ ಮೃತಪಟ್ಟಿದ್ದಾರೆ.

ತುಮಕೂರು ತಾಲ್ಲೂಕಿನ 127, ಚಿಕ್ಕನಾಯಕನಹಳ್ಳಿ 49, ಗುಬ್ಬಿ 29, ಕೊರಟಗೆರೆ 13, ಕುಣಿಗಲ್ 24, ಮಧುಗಿರಿ 37, ಪಾವಗಡ 43, ಶಿರಾ 48, ತಿಪಟೂರು 45, ತುರುವೇಕೆರೆ ತಾಲ್ಲೂಕಿನ 20 ಮಂದಿಗೆ ಸೋಂಕು ದೃಢವಾಗಿದೆ. ಇವರಲ್ಲಿ 269 ಮಂದಿ ಪುರುಷರು ಹಾಗೂ 166 ಮಂದಿ ಮಹಿಳೆಯರು ಇದ್ದಾರೆ. ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 356 ಮಂದಿ ಗುಣಮುಖರಾಗಿ ಬುಧವಾರ ಮನೆಗಳಿಗೆ ತೆರಳಿದರು.

ಒಟ್ಟು 13,434 ಮಂದಿ ಸೋಂಕು ತಗುಲಿದ್ದು 10,826 ಮಂದಿ ಗುಣಮುಖರಾಗಿದ್ದಾರೆ. 2,307 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 9,779 ಮತ್ತು ದ್ವಿತೀಯ ಸಂಪರ್ಕಿತ 11,953 ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಕಾಂಗ್ರೆಸ್ ಮುಖಂಡ ಸಾವು

ತುಮಕೂರು: ಜಿಲ್ಲಾ ಕಾಂಗ್ರೆಸ್‍ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ತು.ಬಿ.ಮಲ್ಲೇಶ್ (69) ಬುಧವಾರ ಕೊರೊನಾ ಸೋಂಕಿನಿಂದ ಮೃತಪಟ್ಟರು. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಮೃತರಿಗೆ ಪತ್ನಿ ಶಾಂತಕುಮಾರಿ, ಪುತ್ರ ಕಿರಣ್‍ನಾಯಕ್, ಸೊಸೆ ಕಾವ್ಯಶ್ರೀ, ಮೊಮ್ಮಗಳು ನಿಹಾರಿಕಾ ಇದ್ದಾರೆ. ನಗರದ ಚಿಕ್ಕಪೇಟೆಯ ಹರಿಸಿಂಗರಬೀದಿ ವಾಸಿ ಮಲ್ಲೇಶ್, ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸಮಾಡಿ ನಿವೃತ್ತರಾಗಿದ್ದರು. ಅಂತ್ಯಕ್ರಿಯೆ ನಗರದ ಗಾರ್ಡನ್ ರಸ್ತೆಯಲ್ಲಿರುವ ಚಿತಾಗಾರದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT