ಸಭೆಯಲ್ಲಿ ಮಾತನಾಡಿದ ಯಶ್, ‘ನಿಮ್ಮ ಅಭಿಮಾನಕ್ಕೆ ಮನಸೋತಿದ್ದೇನೆ. ಮೊಳಕಾಲ್ಮುರು ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚಿಸಲು ಬಂದಿದ್ದೇನೆ. ಅವರು ಗೆದ್ದ ನಂತರ ನಾನೇ ಅಭ್ಯರ್ಥಿಯಾಗಿ ನಿಂತು ಇಲ್ಲಿನ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ಕೆಲಸ ಮಾಡುತ್ತೇನೆ. ಒಂದು ವೇಳೆ ಅವರು ನಮ್ಮ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸದೇ ಇದ್ದರೆ, ಅವರ ವಿರುದ್ಧ ನಿಂತು ಪ್ರಚಾರ ಮಾಡುವ ಕೆಲಸ ಮಾಡುತ್ತೇನೆ ಎಂದು ಶ್ರೀರಾಮುಲುಗೆ ಷರತ್ತು ಹಾಕಿದ್ದೇನೆ’ ಎಂದು ಹೇಳಿದರು.