ಇಂದಿರಾ ಗಾಂಧಿ ಗರೀಬಿ ಹಠಾವೊ ಎಂದು ಹೇಳಿಕೊಂಡೇ ಬಂದರು. ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಬಡತನ ನಿರ್ಮೂಲನೆ ಎಂದು ಹೇಳಿಕೊಂಡು ಬಂದರು. ಬಡವರ ಬಡತನ ನಿರ್ಮೂಲನೆ ಆಗಲೇ ಇಲ್ಲ. ಅಜ್ಜಿ, ಅಪ್ಪ, ಅಮ್ಮ ಹೇಳಿದ್ದನ್ನೇ ಮೊಮ್ಮಗ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಬಡತನ ನಿರ್ಮೂಲನೆಗೆ ಆದಾಯ ಖಾತ್ರಿ ಯೋಜನೆ ಹೆಸರಿನಲ್ಲಿ ಬಡ ಕುಟುಂಬಕ್ಕೆ ₹ 72 ಸಾವಿರ ಜಮಾ ಮಾಡುವುದಾಗಿ ಹೇಳಿದ್ದಾರೆ. ಇದೂ ಹಾಗೆಯೇ ಆಗಲಿದೆ’ ಎಂದು ಸಿ.ಟಿ.ರವಿ ಲೇವಡಿ ಮಾಡಿದರು.