ಆವಿಷ್ಕಾರ ಸಂಘಟನೆಯ ಸಾಗರ್, ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಮಂಜುಳಾ ಗೋನವಾರ ಮಾತನಾಡಿ, ‘ಹೋರಾಟದ ಬಲದಿಂದ ಮಾತ್ರ ನ್ಯಾಯ ದೊರೆಯುತ್ತದೆ. ದಾನಮ್ಮ, ರಕ್ಷಿತಾ, ಆಸೀಫ, ನಿರ್ಭಯ ಮುಂತಾದ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರಗಳು ಯುವಪೀಳಿಗೆಯ ಹೋರಾಟಕ್ಕೆ ನಾಂದಿ ಆಗಿದೆ. ಮುಂದೆ ಈ ಹೋರಾಟದ ಕಿಡಿ ಎಲ್ಲೆಡೆ ಹರಡಲಿ’ ಎಂದು ಆಶಿಸಿದರು.