ಸಭೆಯಲ್ಲಿ ಮಾತನಾಡಿದ ಮುಖಂಡ ಅಲೋಕ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗುತ್ತಿರುವ ಜಾಗ ಸೂಕ್ತವಾಗಿಲ್ಲ. ಈ ಭಾಗದಲ್ಲಿ ಹೇಮಾವತಿ ನಾಲೆ, ಶಾಲೆ, ಶಿರಾ- ನಂಜನಗೂಡು ರಸ್ತೆ, ಜಾನುವಾರು ಬಳಕೆಯ ಕಟ್ಟೆ, ವಾಸದ ಮನೆ, ರೇಷ್ಮೆ ಇಲಾಖೆ ಇದೆ. ಈಗಾಗಲೇ ಹಲವರು ಮನವಿ ನೀಡಿದ್ದರೂ, ಪ್ರಯೋಜನವಾಗದ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.