<p><strong>ಗುಬ್ಬಿ:</strong> ತಾಲ್ಲೂಕಿನಲ್ಲಿ ನೀರಾವರಿ ಸೌಕರ್ಯ ಉತ್ತಮವಾಗಿರುವುದರಿಂದ ಬೇಸಿಗೆ ಆರಂಭವಾಗುತ್ತಿದ್ದಂತೆ ಶಿರಾ ಭಾಗದ ಕುರಿಗಾಹಿಗಳು ತಾಲ್ಲೂಕಿನ ವಿವಿಧೆಡೆಗೆ ಬರುತ್ತಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಊರಿಗೆ ಮರಳುತ್ತಾರೆ. ಈ ರೂಢಿ ಅನೇಕ ವರ್ಷಗಳಿಂದಲೂ ಇದೆ.</p>.<p>ತಾಲ್ಲೂಕಿನಲ್ಲಿ ತೆಂಗು ಮತ್ತು ಅಡಿಕೆ ತೋಟಗಳು ಹೆಚ್ಚಾಗಿ ಇರುವುದರಿಂದ ಕುರಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ರೈತರು ಗೊಬ್ಬರಕ್ಕಾಗಿ ತೋಟಗಳಿಗೆ ಕುರಿ ಮಂದೆಯನ್ನು ಕರೆಸುತ್ತಾರೆ. ಕುರಿಗಳ ಲೆಕ್ಕಾಚಾರದಲ್ಲಿ ದಿನವೊಂದಕ್ಕೆ ಒಂದು ಕುರಿಗೆ ₹1ರಿಂದ ₹2 ದರ ನಿಗದಿಪಡಿಸುತ್ತಾರೆ.</p>.<p>ಹಲವು ಕುರಿಗಾಹಿಗಳು ಕುಟುಂಬ ಸಮೇತರಾಗಿ ಬಂದು ನಾಲ್ಕೈದು ತಿಂಗಳು ಈ ಭಾಗದಲ್ಲಿಯೇ ನೆಲೆಸುತ್ತಾರೆ. ಮಂದೆ ಹಾಕಿಸುವವರೇ ಕುರಿಗಾಹಿಗಳಿಗೆ ಅಗತ್ಯ ದವಸ, ಧಾನ್ಯ ಒದಗಿಸುತ್ತಾರೆ. </p>.<p>ಮಂದೆ ಹಾಕಿಸುವುದರಿಂದ ರೈತರಿಗೆ ಗೊಬ್ಬರದ ಅವಶ್ಯಕತೆ ಕಡಿಮೆಯಾದರೆ, ಕುರಿಗಾಹಿಗಳಿಗೆ ಹಣದ ಅವಶ್ಯಕತೆ ಪೂರೈಸಿಕೊಳ್ಳಲು ಸಾಧ್ಯವಾಗುತ್ತಿದೆ.</p>.<p>ಇತ್ತೀಚಿನ ದಿನಗಳಲ್ಲಿ ಕುರಿ ಸಾಕಾಣಿಕೆ ಲಾಭದಾಯಕವಾಗುತ್ತಿರುವುದರಿಂದ ವಿದ್ಯಾವಂತ ಯುವಕರೂ ಕುರಿ ಸಾಕಾಣಿಕೆಯತ್ತ ಒಲವು ತೋರಿಸುತ್ತಿದ್ದಾರೆ</p>.<p>ಬಯಲುಸೀಮೆ ಪ್ರದೇಶದಿಂದ ಬರುವ ಕುರಿಗಾಹಿಗಳು ಮಳೆಗಾಲದಲ್ಲಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಮಳೆಗಾಲ ಅಂತ್ಯವಾಗುತ್ತಿದ್ದಂತೆ ನೀರಿನ ಅನುಕೂಲ ಇರುವೆಡೆ ವಲಸೆ ಹೋಗುತ್ತಾರೆ.</p>.<p>‘ನಮ್ಮ ಭಾಗದಲ್ಲಿ ನೀರಿನ ಕೊರತೆ ಇದೆ. ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇಲ್ಲ .ಈ ಭಾಗದಲ್ಲಿ ತೋಟ ಹೆಚ್ಚಾಗಿರುವುದರಿಂದ ಗೊಬ್ಬರಕ್ಕೆ ಬೇಡಿಕೆ ಇದೆ. ಹಾಗಾಗಿ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಈ ಭಾಗಕ್ಕೆ ಬಂದು ಜೀವನ ಸಾಗಿಸುತ್ತೇವೆ. ತೋಟದ ಮಾಲೀಕರು ನೀಡುವ ಹಣ ಹಾಗೂ ಕುರಿ ಮರಿಗಳನ್ನು ಮಾರಿ ಹಣ ಸಂಗ್ರಹಿಸುತ್ತೇವೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸ್ವಗ್ರಾಮಗಳಿಗೆ ತೆರಳಿ, ಕೃಷಿ ಚಟುವಟಿಕೆ ಜೊತೆಗೆ ಕುರಿ ಮೇಯಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ಕುರಿಗಾಹಿ ಚಿತ್ತಯ್ಯ.</p>.<p>ಪೂರ್ವಜರ ಕಾಲದಿಂದಲೂ ಕುರಿ ಸಾಕಾಣಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದೇವೆ. ನಾವು ವಿದ್ಯಾವಂತರಾಗಿ ಬೇರೆ ಕೆಲಸ ಮಾಡುವುದಕ್ಕಿಂತಲೂ ಕುರಿ ಸಾಕಾಣಿಕೆಯಲ್ಲಿ ಉತ್ತಮ ಆದಾಯ ಕಾಣಲು ಸಾಧ್ಯವಾಗುತ್ತಿದೆ. ಆದ್ದರಿಂದ ಓದಿದ್ದರೂ ಕುರಿ ಮೇಯಿಸಲು ಹಿಂಜರಿಯುವುದಿಲ್ಲ ಎನ್ನುತ್ತಾರೆ ಕುರಿಗಾಹಿ ಮಂಜುನಾಥ್.</p>.<div><blockquote>ಇತ್ತೀಚಿನ ದಿನಗಳಲ್ಲಿ ಜಾನುವಾರು ಸಾಕಾಣಿಕೆ ಕಡಿಮೆಯಾಗಿರುವುದರಿಂದ ಗೊಬ್ಬರಕ್ಕಾಗಿ ಅನಿವಾರ್ಯವಾಗಿ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಿದೆ. ಶಿರಾ ಭಾಗದ ಕುರಿಗಾಹಿಗಳು ಬರುವುದರಿಂದ ಕುರಿಮಂದೆ ಹಾಕಿ ಗೊಬ್ಬರ ಪಡೆಯುತ್ತೇವೆ.</blockquote><span class="attribution"> ಹರ್ಷ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ:</strong> ತಾಲ್ಲೂಕಿನಲ್ಲಿ ನೀರಾವರಿ ಸೌಕರ್ಯ ಉತ್ತಮವಾಗಿರುವುದರಿಂದ ಬೇಸಿಗೆ ಆರಂಭವಾಗುತ್ತಿದ್ದಂತೆ ಶಿರಾ ಭಾಗದ ಕುರಿಗಾಹಿಗಳು ತಾಲ್ಲೂಕಿನ ವಿವಿಧೆಡೆಗೆ ಬರುತ್ತಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಊರಿಗೆ ಮರಳುತ್ತಾರೆ. ಈ ರೂಢಿ ಅನೇಕ ವರ್ಷಗಳಿಂದಲೂ ಇದೆ.</p>.<p>ತಾಲ್ಲೂಕಿನಲ್ಲಿ ತೆಂಗು ಮತ್ತು ಅಡಿಕೆ ತೋಟಗಳು ಹೆಚ್ಚಾಗಿ ಇರುವುದರಿಂದ ಕುರಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ರೈತರು ಗೊಬ್ಬರಕ್ಕಾಗಿ ತೋಟಗಳಿಗೆ ಕುರಿ ಮಂದೆಯನ್ನು ಕರೆಸುತ್ತಾರೆ. ಕುರಿಗಳ ಲೆಕ್ಕಾಚಾರದಲ್ಲಿ ದಿನವೊಂದಕ್ಕೆ ಒಂದು ಕುರಿಗೆ ₹1ರಿಂದ ₹2 ದರ ನಿಗದಿಪಡಿಸುತ್ತಾರೆ.</p>.<p>ಹಲವು ಕುರಿಗಾಹಿಗಳು ಕುಟುಂಬ ಸಮೇತರಾಗಿ ಬಂದು ನಾಲ್ಕೈದು ತಿಂಗಳು ಈ ಭಾಗದಲ್ಲಿಯೇ ನೆಲೆಸುತ್ತಾರೆ. ಮಂದೆ ಹಾಕಿಸುವವರೇ ಕುರಿಗಾಹಿಗಳಿಗೆ ಅಗತ್ಯ ದವಸ, ಧಾನ್ಯ ಒದಗಿಸುತ್ತಾರೆ. </p>.<p>ಮಂದೆ ಹಾಕಿಸುವುದರಿಂದ ರೈತರಿಗೆ ಗೊಬ್ಬರದ ಅವಶ್ಯಕತೆ ಕಡಿಮೆಯಾದರೆ, ಕುರಿಗಾಹಿಗಳಿಗೆ ಹಣದ ಅವಶ್ಯಕತೆ ಪೂರೈಸಿಕೊಳ್ಳಲು ಸಾಧ್ಯವಾಗುತ್ತಿದೆ.</p>.<p>ಇತ್ತೀಚಿನ ದಿನಗಳಲ್ಲಿ ಕುರಿ ಸಾಕಾಣಿಕೆ ಲಾಭದಾಯಕವಾಗುತ್ತಿರುವುದರಿಂದ ವಿದ್ಯಾವಂತ ಯುವಕರೂ ಕುರಿ ಸಾಕಾಣಿಕೆಯತ್ತ ಒಲವು ತೋರಿಸುತ್ತಿದ್ದಾರೆ</p>.<p>ಬಯಲುಸೀಮೆ ಪ್ರದೇಶದಿಂದ ಬರುವ ಕುರಿಗಾಹಿಗಳು ಮಳೆಗಾಲದಲ್ಲಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಮಳೆಗಾಲ ಅಂತ್ಯವಾಗುತ್ತಿದ್ದಂತೆ ನೀರಿನ ಅನುಕೂಲ ಇರುವೆಡೆ ವಲಸೆ ಹೋಗುತ್ತಾರೆ.</p>.<p>‘ನಮ್ಮ ಭಾಗದಲ್ಲಿ ನೀರಿನ ಕೊರತೆ ಇದೆ. ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇಲ್ಲ .ಈ ಭಾಗದಲ್ಲಿ ತೋಟ ಹೆಚ್ಚಾಗಿರುವುದರಿಂದ ಗೊಬ್ಬರಕ್ಕೆ ಬೇಡಿಕೆ ಇದೆ. ಹಾಗಾಗಿ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಈ ಭಾಗಕ್ಕೆ ಬಂದು ಜೀವನ ಸಾಗಿಸುತ್ತೇವೆ. ತೋಟದ ಮಾಲೀಕರು ನೀಡುವ ಹಣ ಹಾಗೂ ಕುರಿ ಮರಿಗಳನ್ನು ಮಾರಿ ಹಣ ಸಂಗ್ರಹಿಸುತ್ತೇವೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸ್ವಗ್ರಾಮಗಳಿಗೆ ತೆರಳಿ, ಕೃಷಿ ಚಟುವಟಿಕೆ ಜೊತೆಗೆ ಕುರಿ ಮೇಯಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ಕುರಿಗಾಹಿ ಚಿತ್ತಯ್ಯ.</p>.<p>ಪೂರ್ವಜರ ಕಾಲದಿಂದಲೂ ಕುರಿ ಸಾಕಾಣಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದೇವೆ. ನಾವು ವಿದ್ಯಾವಂತರಾಗಿ ಬೇರೆ ಕೆಲಸ ಮಾಡುವುದಕ್ಕಿಂತಲೂ ಕುರಿ ಸಾಕಾಣಿಕೆಯಲ್ಲಿ ಉತ್ತಮ ಆದಾಯ ಕಾಣಲು ಸಾಧ್ಯವಾಗುತ್ತಿದೆ. ಆದ್ದರಿಂದ ಓದಿದ್ದರೂ ಕುರಿ ಮೇಯಿಸಲು ಹಿಂಜರಿಯುವುದಿಲ್ಲ ಎನ್ನುತ್ತಾರೆ ಕುರಿಗಾಹಿ ಮಂಜುನಾಥ್.</p>.<div><blockquote>ಇತ್ತೀಚಿನ ದಿನಗಳಲ್ಲಿ ಜಾನುವಾರು ಸಾಕಾಣಿಕೆ ಕಡಿಮೆಯಾಗಿರುವುದರಿಂದ ಗೊಬ್ಬರಕ್ಕಾಗಿ ಅನಿವಾರ್ಯವಾಗಿ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಿದೆ. ಶಿರಾ ಭಾಗದ ಕುರಿಗಾಹಿಗಳು ಬರುವುದರಿಂದ ಕುರಿಮಂದೆ ಹಾಕಿ ಗೊಬ್ಬರ ಪಡೆಯುತ್ತೇವೆ.</blockquote><span class="attribution"> ಹರ್ಷ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>