ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಇದ್ರೆ ಕೆಲ್ಸಾ ಮಾಡ್ತೀವಿ, ಹೋದ್ರೆ ಮನೆಗೆ ಹೋಗ್ತಿವಿ: ಸಚಿವ ಶ್ರೀನಿವಾಸ್

Last Updated 1 ಜುಲೈ 2019, 10:42 IST
ಅಕ್ಷರ ಗಾತ್ರ

ತುಮಕೂರು: ‘ಸರ್ಕಾರ ಏನಾದ್ರೂ ನಮಗೇನು ಬೇಜಾರಿಲ್ಲ. ಇದ್ರೆ ಕೆಲ್ಸಾ ಮಾಡ್ತೀವಿ. ಹೋದ್ರೆ ಮನೆಗೆ ಹೋಗ್ತಿವಿ ಅಷ್ಟೇ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸರ್ಕಾರದಲ್ಲಿ ಇಂಥವರು ಇರುತ್ತಾರೆ ಅಂಥವರೂ ಇರುತ್ತಾರೆ. ಎಲ್ಲರೂ ಒಂದೇ ಮನಸ್ಥಿತಿಯವರಿರಲ್ಲ. ಇಷ್ಟಕ್ಕೂ ಸರ್ಕಾರ ಹೋಗುತ್ತೆ ಎಂದು ಯಾರು ಹೇಳಿದವರು’ ಎಂದು ಪ್ರಶ್ನಿಸಿದರು.

‘ಮೈತ್ರಿ ಸರ್ಕಾರ ಬಂದಾಗಿನಿಂದಲೇ ಈ ತರಹದ್ದು ಮಾಧ್ಯಮಗಳಲ್ಲಿ ಬರುತ್ತಲೇ ಇದೆ. ಕೇವಲ ಮಾಧ್ಯಮಗಳಲ್ಲಷ್ಟೇ ಹೇಳುತ್ತಿದ್ದೀರಿ. ಯಾವ ಶಾಸಕರು ರಾಜೀನಾಮೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಪ್ರತ್ಯೇಕವಾಗಿ ಶಾಸಕರನ್ನು ಮಾಧ್ಯಮದವರು ಮಾತನಾಡಿಸಿದರೆ ಸತ್ಯಾಂಶ ಗೊತ್ತಾಗುತ್ತದೆ’ ಎಂದು ಹೇಳಿದರು.

‘ಶಾಸಕ ಆನಂದ್ ಸಿಂಗ್ ಅವರು ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೊ ಗೊತ್ತಿಲ್ಲ. ಅವರು ರಾಜೀನಾಮೆ ಕೊಟ್ಟರೆ ಸರ್ಕಾರವೇ ಬಿದ್ದು ಹೋಗುತ್ತೆ ಎಂದು ಭಾವಿಸಬೇಕಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT