<p><strong>ತುಮಕೂರು: </strong>ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿಯೇ ಯುವ ತಲೆಮಾರಿಗೆ ಯಕ್ಷಗಾನ ಕಲಿಸಿ ಎಂದು ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸಲಹೆ ನೀಡಿದರು.</p>.<p>ಎಸ್.ಎಸ್.ಪುರಂನ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷದೀವಿಗೆ ಸಂಸ್ಥೆಯು ಶನಿವಾರ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕನ್ನಡವನ್ನು ಸಮೃದ್ಧ ಭಾಷೆಯನ್ನಾಗಿಸುವುದರಲ್ಲಿ ಯಕ್ಷಗಾನದ ಕೊಡುಗೆ ಇದೆ. ಹೊಸ ತಲೆಮಾರು ಮೊಬೈಲ್ ಮಾಯೆಯಲ್ಲಿ ಮುಳುಗಿದೆ. ಅವರ ಹಿರಿಯರು ಧಾರಾವಾಹಿಗಳಲ್ಲಿ ಕಳೆದು ಹೋಗಿದ್ದಾರೆ ಎಂದರು.</p>.<p>ಯಕ್ಷಗಾನದಂತಹ ಕಲೆಗಳಲ್ಲಿ ಮಕ್ಕಳು ಆಸಕ್ತಿ ವಹಿಸುವಂತೆ ಮಾಡುವುದೇ ಇದಕ್ಕಿರುವ ಪರಿಹಾರ. ಯಕ್ಷಗಾನವನ್ನು ಅಭ್ಯಾಸ ಮಾಡುವುದರಿಂದ ಭಾಷೆ, ಭಾವ ಪರಿಷ್ಕರಣೆ ಆಗುತ್ತದೆ. ಸಂಸ್ಕಾರ ಬೆಳೆಯುತ್ತದೆ ಎಂದು ತಿಳಿಸಿದರು.</p>.<p>’ಅತಿಕಾಯ ಕಾಳಗ’ ಎಂಬ ಬೋಧಪ್ರದ ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸಲಾಯಿತು.</p>.<p>ಸಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ನಾಯಕ್ ಆಜೇರು, ಚೆಂಡೆ ವಾದಕರಾಗಿ ಪಿ.ಜಿ. ಜಗನ್ನಿವಾಸರಾವ್ ಪುತ್ತೂರು, ಮದ್ದಳೆವಾದಕರಾಗಿ ಅವಿನಾಶ್ ಬೈಪಾಡಿತ್ತಾಯ, ಚಕ್ರತಾಳ ಕಲಾವಿದರಾಗಿ ಮುರಳಿ ಭಟ್ ಬಾಯಾಡಿ ಸಹಕರಿಸಿದರು.</p>.<p>ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್ (ಅತಿಕಾಯ), ಶಶಾಂಕ ಅರ್ನಾಡಿ (ರಾವಣ ಮತ್ತು ವಿಭಿಷಣ), ಆರತಿ ಪಟ್ರಮೆ (ರಾಮ) ಹಾಗೂ ಸಿಬಂತಿ ಪದ್ಮನಾಭ (ಲಕ್ಷ್ಮಣ) ಇದ್ದರು. ಜ್ಞಾನಬುತ್ತಿ ಸತ್ಸಂಗದ ಕೃಷ್ಣಮೂರ್ತಿ, ಕಲಾವಿದರನ್ನು ಗೌರವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿಯೇ ಯುವ ತಲೆಮಾರಿಗೆ ಯಕ್ಷಗಾನ ಕಲಿಸಿ ಎಂದು ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸಲಹೆ ನೀಡಿದರು.</p>.<p>ಎಸ್.ಎಸ್.ಪುರಂನ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷದೀವಿಗೆ ಸಂಸ್ಥೆಯು ಶನಿವಾರ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕನ್ನಡವನ್ನು ಸಮೃದ್ಧ ಭಾಷೆಯನ್ನಾಗಿಸುವುದರಲ್ಲಿ ಯಕ್ಷಗಾನದ ಕೊಡುಗೆ ಇದೆ. ಹೊಸ ತಲೆಮಾರು ಮೊಬೈಲ್ ಮಾಯೆಯಲ್ಲಿ ಮುಳುಗಿದೆ. ಅವರ ಹಿರಿಯರು ಧಾರಾವಾಹಿಗಳಲ್ಲಿ ಕಳೆದು ಹೋಗಿದ್ದಾರೆ ಎಂದರು.</p>.<p>ಯಕ್ಷಗಾನದಂತಹ ಕಲೆಗಳಲ್ಲಿ ಮಕ್ಕಳು ಆಸಕ್ತಿ ವಹಿಸುವಂತೆ ಮಾಡುವುದೇ ಇದಕ್ಕಿರುವ ಪರಿಹಾರ. ಯಕ್ಷಗಾನವನ್ನು ಅಭ್ಯಾಸ ಮಾಡುವುದರಿಂದ ಭಾಷೆ, ಭಾವ ಪರಿಷ್ಕರಣೆ ಆಗುತ್ತದೆ. ಸಂಸ್ಕಾರ ಬೆಳೆಯುತ್ತದೆ ಎಂದು ತಿಳಿಸಿದರು.</p>.<p>’ಅತಿಕಾಯ ಕಾಳಗ’ ಎಂಬ ಬೋಧಪ್ರದ ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸಲಾಯಿತು.</p>.<p>ಸಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ನಾಯಕ್ ಆಜೇರು, ಚೆಂಡೆ ವಾದಕರಾಗಿ ಪಿ.ಜಿ. ಜಗನ್ನಿವಾಸರಾವ್ ಪುತ್ತೂರು, ಮದ್ದಳೆವಾದಕರಾಗಿ ಅವಿನಾಶ್ ಬೈಪಾಡಿತ್ತಾಯ, ಚಕ್ರತಾಳ ಕಲಾವಿದರಾಗಿ ಮುರಳಿ ಭಟ್ ಬಾಯಾಡಿ ಸಹಕರಿಸಿದರು.</p>.<p>ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್ (ಅತಿಕಾಯ), ಶಶಾಂಕ ಅರ್ನಾಡಿ (ರಾವಣ ಮತ್ತು ವಿಭಿಷಣ), ಆರತಿ ಪಟ್ರಮೆ (ರಾಮ) ಹಾಗೂ ಸಿಬಂತಿ ಪದ್ಮನಾಭ (ಲಕ್ಷ್ಮಣ) ಇದ್ದರು. ಜ್ಞಾನಬುತ್ತಿ ಸತ್ಸಂಗದ ಕೃಷ್ಣಮೂರ್ತಿ, ಕಲಾವಿದರನ್ನು ಗೌರವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>