ಕಂದಿಕೆರೆ ಹೋಬಳಿ ಕಂದಾಯಧಿಕಾರಿ ಕೃಷ್ಣಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ಬೆಂಗಳೂರಿನ ಆನ್ಲೈನ್ ಭೂಮಿ ಕೇಂದ್ರದಲ್ಲಿ ಬಗರ್ ಹುಕುಂಗೆ ಸಂಬಂಧಪಟ್ಟ ಸರ್ವರ್ ಆರಂಭ ಮಾಡಬೇಕು. ಈ ಸರ್ವರ್ ಕಳೆದ ಎರಡು ವರ್ಷದಿಂದ ಸ್ಥಗಿತವಾಗಿದೆ. ಇದರಿಂದ ರೈತರಿಗೆ ಸಾಗುವಳಿ ಚೀಟಿ ಕೊಟ್ಟರೂ ಖಾತೆ, ಪಹಣಿ ನೀಡಲಾಗಿಲ್ಲ. 2000ನೇ ಇಸವಿಯಿಂದ ಆನ್ ಲೈನ್ ಭೂಮಿ ಕೇಂದ್ರ ಆರಂಭವಾಯಿತು, ಈ ವೇಳೆ ಕೆಲವರು ಮಾತ್ರ ಖಾತೆ, ಪಹಣಿ ಮಾಡಿಸಿಕೊಂಡಿದ್ದಾರೆ. ಉಳಿದವರಿಗೆ ಸಾಗುವಳಿ ಚೀಟಿಯ, ಖಾತೆ, ಪಹಣಿ ಆಗಿಲ್ಲ ಎಂದರು.