<p><strong>ತೋವಿನಕೆರೆ (ತುಮಕೂರು):</strong> ‘ಹಲವು ತಳಿಗಳಿದ್ದರೂ ಜಿಲ್ಲೆಯ ಹುಣಸೆ ವೈವಿಧ್ಯಕ್ಕೆ ಹೆಸರುವಾಸಿ. ಕೃಷಿಕರು ಈ ತಳಿಗಳನ್ನು ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಲ್ಲಿ (ಪಿಪಿವಿಎಫ್ಆರ್ಎ) ನೋಂದಣಿ ಮಾಡಿಸಬೇಕು’ ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಜನರಲ್ ಡಿ.ಕೆ.ಅಗರವಾಲ್ ಸಲಹೆ ನೀಡಿದರು.</p>.<p>ಸೋಮವಾರ ಇಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಆಯೋಜಿಸಿದ್ದ ‘ತಳಿಗಳ ರಕ್ಷಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಮೂಲಕ ಹುಣಸೆ ರೈತರ ಸಬಲೀಕರಣ’ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಜಿಲ್ಲೆಯ ‘ಲಕ್ಷ್ಮಣ’ ಹುಣಸೆ ಅತ್ಯಂತ ಉತ್ಕೃಷ್ಟವಾದ ತಳಿ. ‘ಸಿದ್ದು’ ಮತ್ತು ‘ಶಂಕರ ಹಲಸು’ ಈಗಾಗಲೇ ಪ್ರಾಧಿಕಾರದಲ್ಲಿ ನೋಂದಣಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹುಣಸೆ ತಳಿಗಳನ್ನು ನೋಂದಣಿ ಮಾಡಿಸಬೇಕು. ಪ್ರಾಧಿಕಾರದಿಂದ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.</p>.<p>ಐಐಎಚ್ಆರ್ ನಿರ್ದೇಶಕ ಟಿ.ಕೆ.ಬೆಹೆರಾ ಅವರು, ‘ಹುಣಸೆ ಹಣ್ಣಿನಲ್ಲಿ ಎಲ್ಲವೂ ಉಪಯೋಗವಿದೆ. ಹುಣಸೆ ಬೀಜಕ್ಕೂ ಬೇಡಿಕೆ ಹೆಚ್ಚಾಗಿದೆ. ಬೆಳೆಗಾರರು ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ಹುಣಸೆ ಸಂಸ್ಕರಣೆ ಮತ್ತು ಯಂತ್ರಗಳ ಬಳಕೆ, ಹುಣಸೆ ಕೃಷಿ ಭವಿಷ್ಯ ಹಾಗೂ ಸವಾಲು, ಮೌಲ್ಯವರ್ಧನೆ, ಮಾರುಕಟ್ಟೆ ಕುರಿತು ಗೋಷ್ಠಿಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋವಿನಕೆರೆ (ತುಮಕೂರು):</strong> ‘ಹಲವು ತಳಿಗಳಿದ್ದರೂ ಜಿಲ್ಲೆಯ ಹುಣಸೆ ವೈವಿಧ್ಯಕ್ಕೆ ಹೆಸರುವಾಸಿ. ಕೃಷಿಕರು ಈ ತಳಿಗಳನ್ನು ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಲ್ಲಿ (ಪಿಪಿವಿಎಫ್ಆರ್ಎ) ನೋಂದಣಿ ಮಾಡಿಸಬೇಕು’ ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಜನರಲ್ ಡಿ.ಕೆ.ಅಗರವಾಲ್ ಸಲಹೆ ನೀಡಿದರು.</p>.<p>ಸೋಮವಾರ ಇಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಆಯೋಜಿಸಿದ್ದ ‘ತಳಿಗಳ ರಕ್ಷಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಮೂಲಕ ಹುಣಸೆ ರೈತರ ಸಬಲೀಕರಣ’ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಜಿಲ್ಲೆಯ ‘ಲಕ್ಷ್ಮಣ’ ಹುಣಸೆ ಅತ್ಯಂತ ಉತ್ಕೃಷ್ಟವಾದ ತಳಿ. ‘ಸಿದ್ದು’ ಮತ್ತು ‘ಶಂಕರ ಹಲಸು’ ಈಗಾಗಲೇ ಪ್ರಾಧಿಕಾರದಲ್ಲಿ ನೋಂದಣಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹುಣಸೆ ತಳಿಗಳನ್ನು ನೋಂದಣಿ ಮಾಡಿಸಬೇಕು. ಪ್ರಾಧಿಕಾರದಿಂದ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.</p>.<p>ಐಐಎಚ್ಆರ್ ನಿರ್ದೇಶಕ ಟಿ.ಕೆ.ಬೆಹೆರಾ ಅವರು, ‘ಹುಣಸೆ ಹಣ್ಣಿನಲ್ಲಿ ಎಲ್ಲವೂ ಉಪಯೋಗವಿದೆ. ಹುಣಸೆ ಬೀಜಕ್ಕೂ ಬೇಡಿಕೆ ಹೆಚ್ಚಾಗಿದೆ. ಬೆಳೆಗಾರರು ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ಹುಣಸೆ ಸಂಸ್ಕರಣೆ ಮತ್ತು ಯಂತ್ರಗಳ ಬಳಕೆ, ಹುಣಸೆ ಕೃಷಿ ಭವಿಷ್ಯ ಹಾಗೂ ಸವಾಲು, ಮೌಲ್ಯವರ್ಧನೆ, ಮಾರುಕಟ್ಟೆ ಕುರಿತು ಗೋಷ್ಠಿಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>