ತುಮಕೂರು: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಲಕ್ಷ್ಮಿಪುರದಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಭೇಟಿ ನೀಡಿದ ವೇಳೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.
ಮೊದಲಿಗೆ ಜಿಲ್ಲಾಧಿಕಾರಿ ರಾಸುಗಳಿಗೆ ಜ್ವರ ನಿವಾರಣೆ ಲಸಿಕೆ ಹಾಕಿದರು. ನಂತರ ಕೃಷಿ, ಪಶುಪಾಲನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಗ್ರಾಮದಲ್ಲಿ ರೂಪಿಸಿರುವ ಮಾಹಿತಿ ಘಟಕವನ್ನು ವೀಕ್ಷಿಸಿದರು.
ಜನರಿಂದ ದೂರು ಮತ್ತು ಮನವಿ ಸ್ವೀಕರಿಸಲು ಕೌಂಟರ್ ತೆರೆಯಲಾಗಿದೆ. ಇಲ್ಲಿಗೆ ಲಿಖಿತವಾಗಿ ದೂರುಗಳನ್ನು ಜನರು ಸಲ್ಲಿಸುತ್ತಿದ್ದು ನಂತರ ಅವುಗಳು ಆಯಾ ಇಲಾಖೆಗಳಿಗೆ ರವಾನೆ ಆಗಲಿದೆ.