ನಮ್ಮ ಊರಿಂದ ಮಾರುಕಟ್ಟೆಗೆ ತರಕಾರಿ ಒಯ್ಯಲು 18 ಕಿ.ಮೀ. ಕ್ರಮಿಸಬೇಕಿತ್ತು. ದಾರಿಯಲ್ಲಿ ಯಾವ ಪೊಲೀಸರು ನಮ್ಮನ್ನು ತಡೆಯಲಿಲ್ಲ. ಯಲ್ಲಾಪುರದಲ್ಲಿ ಪೊಲೀಸರು ಎದುರಾದಾಗ ನಾವೇ ಮೂಲಂಗಿ ತುಂಬಿದ್ದ ವಾಹನ ನಿಲ್ಲಿಸಿದೆವು. ಪೊಲೀಸರು ವಿಚಾರಿಸಿ, ‘ಬಿರ ಬಿರನೇ ಹೋಗಿ, ಮಾರಿಕೊಂಡು ಬರಪ್ಪ, ಮಾರ್ಕೆಟ್ನಲ್ಲಿ ತುಂಬ ಹೊತ್ತು ಇರಬೇಡಿ’ ಎಂದೇಳಿ ಕಳುಹಿಸಿದರು ಎಂದು ಕೊರಟಗೆರೆ ತಾಲ್ಲೂಕಿನ ಜೋನಿಗರಹಳ್ಳಿ ರೈತ ಲೋಕೇಶ್ ತಿಳಿಸಿದರು.