ಸಂಗೀತೋತ್ಸವ ಮಾರ್ಚ್ 25ರಂದು ಆರಂಭವಾಗಲಿದೆ. ನಾಡಿನ ಪ್ರಖ್ಯಾತ ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ. ಗಾಯಕ ಕೆ.ಜೆ.ಯೇಸುದಾಸ್, ಪೀಟಿಲು ವಾದಕರಾದ ಲಾಲ್ಗುಡಿ ಜಿ.ಜೆ.ಆರ್ ಕೃಷ್ಣನ್ –ಲಾಲ್ಗುಡಿ ಜಿ.ಜೆ.ಆರ್ ವಿಜಯಲಕ್ಷ್ಮಿ, ಮ್ಯಾಂಡೊಲಿನ್ ವಾದಕ ಯು.ರಾಜೇಶ್, ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಸೇರಿದಂತೆ 300ಕ್ಕೂ ಹೆಚ್ಚು ಕಲಾವಿದರು ಉತ್ಸವದಲ್ಲಿ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ.