<p><strong>ಶಿರಾ:</strong> ತಾಲ್ಲೂಕಿನ ಮದಲೂರು ಕೆರೆಗೆ ಕಳೆದ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ಹೇಮಾವತಿ ನೀರು ಮತ್ತೇ ಹರಿಯುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.</p>.<p>ನವಂಬರ್ 30 ರಂದು ಮದಲೂರು ಕೆರೆಗೆ ನೀರು ಸೋಮವಾರದಿಂದ ಸ್ಥಗಿತಗೊಂಡಿದ್ದು, ನಾಲೆ ಹಾದು ಬರುವ ಮಾರ್ಗದಲ್ಲಿರುವ ಅಜ್ಜೇನಹಳ್ಳಿ, ಭೂಪಸಂದ್ರ, ಮಾಯಸಂದ್ರ, ಚಿಕ್ಕಗೂಳ ಸೇರಿದಂತೆ ಈ ಭಾಗ ಜನರು ನಾಲೆಗೆ ಪೈಪ್ ಹಾಕಿ ನೀರನ್ನು ಅವರ ಊರುಗಳ ಕೆರೆಗಳಿಗೆ ಹರಿಸಿಕೊಳ್ಳಲು ಮುಂದಾದ ಹಿನ್ನಲೆಯಲ್ಲಿ ಮದಲೂರು ಕೆರೆಗೆ ಹರಿಯುತ್ತಿದ್ದ ನೀರು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.</p>.<p>ಭೂಪಸಂದ್ರ ಮತ್ತು ಅಜ್ಜೇನಹಳ್ಳಿ ಭಾಗದ ರೈತರು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರನ್ನು ಭೇಟಿಯಾಗಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕನಿಷ್ಠ ಒಂದು ವಾರ ನೀರು ಹರಿಸುವಂತೆ ಮನವಿ ಮಾಡಿದ್ದರು.</p>.<p>ಶಾಸಕರು ಇವರಿಗೆ ಯಾವುದೇ ರೀತಿಯ ಭರವಸೆಯನ್ನು ನೀಡಿರಲಿಲ್ಲ. ಬುಧವಾರ ಅಧಿಕಾರಿಗಳು ತೆರಳಿ ನಾಲೆಯಲ್ಲಿ ಹಾಕಿದ್ದ ಪೈಪ್ಗಳನ್ನು ಹಾಗೂ ಅಡ್ಡವಾಗಿ ಹಾಕಿದ್ದ ಮಣ್ಣನ್ನು ತೆರವುಗೊಳಿಸಿ ಮದಲೂರು ಕೆರೆಗೆ ನೀರು ಹರಿಯುವಂತೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ:</strong> ತಾಲ್ಲೂಕಿನ ಮದಲೂರು ಕೆರೆಗೆ ಕಳೆದ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ಹೇಮಾವತಿ ನೀರು ಮತ್ತೇ ಹರಿಯುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.</p>.<p>ನವಂಬರ್ 30 ರಂದು ಮದಲೂರು ಕೆರೆಗೆ ನೀರು ಸೋಮವಾರದಿಂದ ಸ್ಥಗಿತಗೊಂಡಿದ್ದು, ನಾಲೆ ಹಾದು ಬರುವ ಮಾರ್ಗದಲ್ಲಿರುವ ಅಜ್ಜೇನಹಳ್ಳಿ, ಭೂಪಸಂದ್ರ, ಮಾಯಸಂದ್ರ, ಚಿಕ್ಕಗೂಳ ಸೇರಿದಂತೆ ಈ ಭಾಗ ಜನರು ನಾಲೆಗೆ ಪೈಪ್ ಹಾಕಿ ನೀರನ್ನು ಅವರ ಊರುಗಳ ಕೆರೆಗಳಿಗೆ ಹರಿಸಿಕೊಳ್ಳಲು ಮುಂದಾದ ಹಿನ್ನಲೆಯಲ್ಲಿ ಮದಲೂರು ಕೆರೆಗೆ ಹರಿಯುತ್ತಿದ್ದ ನೀರು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.</p>.<p>ಭೂಪಸಂದ್ರ ಮತ್ತು ಅಜ್ಜೇನಹಳ್ಳಿ ಭಾಗದ ರೈತರು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರನ್ನು ಭೇಟಿಯಾಗಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕನಿಷ್ಠ ಒಂದು ವಾರ ನೀರು ಹರಿಸುವಂತೆ ಮನವಿ ಮಾಡಿದ್ದರು.</p>.<p>ಶಾಸಕರು ಇವರಿಗೆ ಯಾವುದೇ ರೀತಿಯ ಭರವಸೆಯನ್ನು ನೀಡಿರಲಿಲ್ಲ. ಬುಧವಾರ ಅಧಿಕಾರಿಗಳು ತೆರಳಿ ನಾಲೆಯಲ್ಲಿ ಹಾಕಿದ್ದ ಪೈಪ್ಗಳನ್ನು ಹಾಗೂ ಅಡ್ಡವಾಗಿ ಹಾಕಿದ್ದ ಮಣ್ಣನ್ನು ತೆರವುಗೊಳಿಸಿ ಮದಲೂರು ಕೆರೆಗೆ ನೀರು ಹರಿಯುವಂತೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>