2020ರ ಮಾರ್ಚ್ 15ರಂದು ಮಧುಗಿರಿ ತಾಲ್ಲೂಕಿನ ಡಿ.ವಿ. ಹಳ್ಳಿಯ ತನ್ನ ಮಾವ ತಿಪ್ಪೇಸ್ವಾಮಿ ಅವರ ಮನೆಗೆ ಬಂದಿದ್ದ ಆರೋಪಿಯು ತನ್ನ ಹೆಂಡತಿ ಅನಿತಾ ಮೇಲೆ ಅನುಮಾನಪಟ್ಟು ಮಚ್ಚಿನಿಂದ ಆಕೆಗೆ ಹೊಡೆದು ಕೊಲೆಗೆ ಯತ್ನಿಸಿದ್ದ. ಆಗ ಮನೆಯಲ್ಲಿದ್ದ ಅನಿತಾ ಅವರ ತಂಗಿ ಮೇಘನಾ ತನ್ನ ಕೈಯನ್ನು ಅಡ್ಡ ಇಟ್ಟಾಗ ಆರೋಪಿಯು ಬೀಸಿದ ಮಚ್ಚಿನ ಏಟಿಗೆ ಆಕೆಯ ಎಡಗೈನ ಮುಂಗೈ ಕತ್ತರಿಸಿ ಹೋಗಿತ್ತು.