ನಗರದ ಹೊರ ವಲಯದ ಯಲ್ಲಾಪುರದ ಬಳಿ ನಡೆದಿದ್ದ ಕೊಲೆ ಪ್ರಕರಣದ ವಿಚಾರಣೆಗಾಗಿ ಮೇ 20ರಂದು ಗ್ರಾಮಾಂತರ ಠಾಣೆಯ ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿದ್ದರು. ವಿಚಾರಣೆ ಮುಗಿದ ನಂತರ ವಾಪಸ್ ಕಳುಹಿಸಿದ್ದರು. ಮರು ದಿನ ಪೊಲೀಸರು ಮನೆಗೆ ಬಂದು ಮತ್ತೆ ಕರೆದುಕೊಂಡು ಹೋಗಿ 9 ದಿನಗಳ ಕಾಲ ವಿವಿಧ ಠಾಣೆಗಳಲ್ಲಿ ವಿಚಾರಣೆ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.