<p><strong>ತುಮಕೂರು</strong>: ಯುವಪತ್ರಕರ್ತರು ತಮ್ಮ ಪ್ರಾಯೋಗಿಕ ಕೌಶಲಗಳನ್ನು ಹರಿತಗೊಳಿಸುವುದರಿಂದ ಇಂದಿನ ಮಾಧ್ಯಮಗಳ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯ ಎಂದು ಪತ್ರಕರ್ತ ಪಿ.ಎಲ್.ಮಾರುತೇಶ್ ತಿಳಿಸಿದರು.</p>.<p>ತುಮಕೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಟೆಲಿವಿಷನ್ ಸುದ್ದಿ ಕೌಶಲಗಳು’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>ಬದಲಾಗುತ್ತಿರುವ ಕಾಲದಲ್ಲಿ ಟಿವಿ ವಾಹಿನಿಗಳು ವೇಗ ಹಾಗೂ ದಕ್ಷತೆ ಬಯಸುತ್ತವೆ. ಪ್ರಚಲಿತ ವಿದ್ಯಮಾನಗಳ ಕುರಿತ ವಿಸ್ತಾರವಾದ ತಿಳಿವಳಿಕೆಯೊಂದಿಗೆ ಟಿವಿ ಕ್ಷೇತ್ರ ಬಯಸುವ ಚುರುಕುತನ ಹಾಗೂ ಕೌಶಲಗಳನ್ನು ಯುವಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದರು.</p>.<p>ತರಗತಿಯಲ್ಲಿ ತಿಳಿದುಕೊಳ್ಳುವ ಸೈದ್ಧಾಂತಿಕ ವಿಷಯಗಳ ತಳಹದಿಯಲ್ಲಿ ಪ್ರಾಯೋಗಿಕ ಜ್ಞಾನ ಅಭಿವೃದ್ಧಿಪಡಿಸಿಕೊಳ್ಳಬೇಕು. ಸಿದ್ಧಾಂತ ಮತ್ತು ಪ್ರಯೋಗಗಳ ನಡುವೆ ಸಮತೋಲನ ಸಾಧಿಸುವುದು ಇಂದಿನ ಅಗತ್ಯ ಎಂದು ಹೇಳಿದರು.</p>.<p>ವಿಭಾಗದ ಸಂಯೋಜಕ ಕೆ.ವಿ.ಸಿಬಂತಿ ಪದ್ಮನಾಭ ಮಾತನಾಡಿ, ಕೌಶಲಗಳ ಪರಿಣತಿ ಅಚಾನಕ್ಕಾಗಿ ಸೃಷ್ಟಿಯಾಗುವ ವಿದ್ಯೆಯಲ್ಲ. ಅದಕ್ಕೆ ನಿರಂತರ ಪರಿಶ್ರಮಬೇಕು. ಯಾವುದೇ ಕಲೆಯ ಅಭ್ಯಾಸದಲ್ಲಿ ನಿರಂತರತೆ ಇದ್ದಾಗ ಯಶಸ್ಸು ಕಾಣಲು ಸಾಧ್ಯ ಎಂದು ವಿವರಿಸಿದರು.</p>.<p>ಉಪನ್ಯಾಸಕ ಕೆ.ಎನ್.ಬಾನುಪ್ರಸಾದ್ ಇದ್ದರು. ಟಿವಿ ವಾರ್ತೆಯ ತಯಾರಿ, ಮಂಡನೆ ಹಾಗೂ ಪ್ರಸಾರದ ವಿವಿಧ ಕೌಶಲಗಳ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಯುವಪತ್ರಕರ್ತರು ತಮ್ಮ ಪ್ರಾಯೋಗಿಕ ಕೌಶಲಗಳನ್ನು ಹರಿತಗೊಳಿಸುವುದರಿಂದ ಇಂದಿನ ಮಾಧ್ಯಮಗಳ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯ ಎಂದು ಪತ್ರಕರ್ತ ಪಿ.ಎಲ್.ಮಾರುತೇಶ್ ತಿಳಿಸಿದರು.</p>.<p>ತುಮಕೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಟೆಲಿವಿಷನ್ ಸುದ್ದಿ ಕೌಶಲಗಳು’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>ಬದಲಾಗುತ್ತಿರುವ ಕಾಲದಲ್ಲಿ ಟಿವಿ ವಾಹಿನಿಗಳು ವೇಗ ಹಾಗೂ ದಕ್ಷತೆ ಬಯಸುತ್ತವೆ. ಪ್ರಚಲಿತ ವಿದ್ಯಮಾನಗಳ ಕುರಿತ ವಿಸ್ತಾರವಾದ ತಿಳಿವಳಿಕೆಯೊಂದಿಗೆ ಟಿವಿ ಕ್ಷೇತ್ರ ಬಯಸುವ ಚುರುಕುತನ ಹಾಗೂ ಕೌಶಲಗಳನ್ನು ಯುವಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದರು.</p>.<p>ತರಗತಿಯಲ್ಲಿ ತಿಳಿದುಕೊಳ್ಳುವ ಸೈದ್ಧಾಂತಿಕ ವಿಷಯಗಳ ತಳಹದಿಯಲ್ಲಿ ಪ್ರಾಯೋಗಿಕ ಜ್ಞಾನ ಅಭಿವೃದ್ಧಿಪಡಿಸಿಕೊಳ್ಳಬೇಕು. ಸಿದ್ಧಾಂತ ಮತ್ತು ಪ್ರಯೋಗಗಳ ನಡುವೆ ಸಮತೋಲನ ಸಾಧಿಸುವುದು ಇಂದಿನ ಅಗತ್ಯ ಎಂದು ಹೇಳಿದರು.</p>.<p>ವಿಭಾಗದ ಸಂಯೋಜಕ ಕೆ.ವಿ.ಸಿಬಂತಿ ಪದ್ಮನಾಭ ಮಾತನಾಡಿ, ಕೌಶಲಗಳ ಪರಿಣತಿ ಅಚಾನಕ್ಕಾಗಿ ಸೃಷ್ಟಿಯಾಗುವ ವಿದ್ಯೆಯಲ್ಲ. ಅದಕ್ಕೆ ನಿರಂತರ ಪರಿಶ್ರಮಬೇಕು. ಯಾವುದೇ ಕಲೆಯ ಅಭ್ಯಾಸದಲ್ಲಿ ನಿರಂತರತೆ ಇದ್ದಾಗ ಯಶಸ್ಸು ಕಾಣಲು ಸಾಧ್ಯ ಎಂದು ವಿವರಿಸಿದರು.</p>.<p>ಉಪನ್ಯಾಸಕ ಕೆ.ಎನ್.ಬಾನುಪ್ರಸಾದ್ ಇದ್ದರು. ಟಿವಿ ವಾರ್ತೆಯ ತಯಾರಿ, ಮಂಡನೆ ಹಾಗೂ ಪ್ರಸಾರದ ವಿವಿಧ ಕೌಶಲಗಳ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>