ರಾಗಿ, ಅವರೆ, ತೊಗರಿ, ಭತ್ತ, ಜೋಳ ಮುಂತಾದ ಬೆಳೆಗಳು ನಳನಳಿಸುವಂತೆ ಮಾಡಿದೆ. ಜತೆಗೆ ತೆಂಗು, ಅಡಿಕೆ ತೋಟಗಳಲ್ಲಿ ಅಲಲ್ಲಿ ಮಳೆಯ ನೀರು ಸಂಗ್ರಹವಾಗಿದೆ. ಇನ್ನೊಂದೆಡೆ ಮುಂಗಾರು ಬಿತ್ತನೆ ಮಾಡದ ರೈತರು ರಾಗಿ ಪೈರನ್ನು ನಾಟಿ ಮಾಡುತ್ತಿರುವುದು ಕಂಡು ಬಂದಿದೆ. ಪಟ್ಟಣದ ದಬ್ಬೇಘಟ್ಟ, ತಿಪಟೂರು, ಬಾಣಸಂದ್ರ ಮತ್ತು ಮಾಯಸಂದ್ರ ರಸ್ತೆಗಳ ಬದಿಯ ಚರಂಡಿಗಳಲ್ಲಿ ಮಳೆಯ ನೀರು ತುಂಬಿ ರಸ್ತೆಯ ಮೇಲೆ ಹರಿಯಿತು.