ಉಚಿತ ಊಟ, ಉಪಾಹಾರ, ವಸತಿ ಸೌಲಭ್ಯವಿದ್ದು ಉತ್ತೀರ್ಣರಾದವರಿಗೆ ಆಯ್ದ ಮೇಳಗಳಲ್ಲಿ ಉದ್ಯೋಗದ ವ್ಯವಸ್ಥೆ ಮಾಡಲಾಗುವುದು. ಗುರುಕುಲ ಪದ್ದತಿಯಂತೆ ನಡೆಸಲುದ್ದೇಶಿಸುವ ಯಕ್ಷಗಾನದ ಶಿಕ್ಷಣಕ್ಕಾಗಿ ಸೇರಬಯಸುವವರು ಈ ತಿಂಗಳ 20ರ ಒಳಗೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಅಂಚೆ ಐರೋಡಿ 576226, ಉಡುಪಿ ಜಿಲ್ಲೆ ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಉಡುಪಿ ಜಿಲ್ಲೆಯ ಸಾಲಿಗ್ರಾಮದ ಗುಂಡ್ಮಿ
ಯಲ್ಲಿರುವ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪಕ್ಕೆ ನೇರವಾಗಿ ಬಂದು ಅರ್ಜಿ ಕೊಡಬಹುದು. ಮಾಹಿತಿಗೆ 9880605610 ಸಂಪರ್ಕಿಸಬಹುದು ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.