ಬೈಂದೂರು: ಕುಂದಾಪುರದಲ್ಲಿ ಚಿನ್ನ, ಬೆಳ್ಳಿ ಒಡವೆ ಸಿದ್ಧಪಡಿಸಿ ಮಾರುವ ಸಾಯಿನಾಥ ಶೇಟ್ ಲಾಕ್ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಿರ್ಗತಿಕರು, ಕಡು ಬಡವರು, ಭಿಕ್ಷುಕರು ಮತ್ತು ಅಶಕ್ತರಿಗೆ ಉಚಿತ ಊಟ ನೀಡುತ್ತಿದ್ದಾರೆ. ಅವರು ನಡೆಸುತ್ತಿರುವ ಈ ಅನ್ನದಾಸೋಹ ಶನಿವಾರ 41 ದಿನ ಪೂರೈಸಿದೆ. ಯಾವುದೇ ಪ್ರಚಾರ ಬಯಸದೆ ಅವರು ಇದನ್ನು ಮಾಡುತ್ತಿದ್ದಾರೆ.