<p><strong>ಬೈಂದೂರು: </strong>ಕುಂದಾಪುರದಲ್ಲಿ ಚಿನ್ನ, ಬೆಳ್ಳಿ ಒಡವೆ ಸಿದ್ಧಪಡಿಸಿ ಮಾರುವ ಸಾಯಿನಾಥ ಶೇಟ್ ಲಾಕ್ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಿರ್ಗತಿಕರು, ಕಡು ಬಡವರು, ಭಿಕ್ಷುಕರು ಮತ್ತು ಅಶಕ್ತರಿಗೆ ಉಚಿತ ಊಟ ನೀಡುತ್ತಿದ್ದಾರೆ. ಅವರು ನಡೆಸುತ್ತಿರುವ ಈ ಅನ್ನದಾಸೋಹ ಶನಿವಾರ 41 ದಿನ ಪೂರೈಸಿದೆ. ಯಾವುದೇ ಪ್ರಚಾರ ಬಯಸದೆ ಅವರು ಇದನ್ನು ಮಾಡುತ್ತಿದ್ದಾರೆ.</p>.<p>ಪ್ರತಿದಿನ 150 ಕ್ಕೂ ಅಧಿಕ ಊಟದ ಪೊಟ್ಟಣಗಳನ್ನು ಸ್ಕೂಟರ್ನಲ್ಲಿ ಹಾಕಿಕೊಂಡು ರಸ್ತೆ ಬದಿಯಲ್ಲಿ ಹಸಿದವರಿಗೆ ವಿತರಿಸುತ್ತಾರೆ.</p>.<p>ಶನಿವಾರ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಬಯಲಿನ ಗುಡಿಸಿಲಿನಲ್ಲಿ ದಿನ ಕಳೆಯುತ್ತಿರುವ ಅಲೆಮಾರಿಗಳಿಗೆ ಊಟದ ಪ್ಯಾಕೆಟ್ ವಿತರಿಸಿದರು.</p>.<p>’ನಾನು ದುಡಿಮೆಯಿಂದ ಜೀವನ ನಡೆಸುವ ಸಾಮಾನ್ಯ ವ್ಯಕ್ತಿ, ಹಸಿವೆ ಸಂಕಟದ ಅನುಭವ ಇದೆ.ಆದ್ದರಿಂದ ಲಾಕ್ಡೌನ್ ಸಂದರ್ಭ ಯಾರು ಕೂಡ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಹಲವರ ಸಹಕಾರದಿಂದ ಮತ್ತು ನನ್ನ ದುಡಿಮೆಯಿಂದ ಕೈಲಾದಷ್ಟು<br />ಸಹಾಯ ಮಾಡುತ್ತಿದ್ದೇನೆ. ಪ್ರತಿ ದಿನ 150 ಅಶಕ್ತರಿಗೆ ಊಟ ವಿತರಿಸುತ್ತಿದ್ದೇನೆ. ಹಿಂದಿನ ಲಾಕ್ಡೌನ್ ಅವಧಿಯಲ್ಲೂ ಆಹಾರದ ಪೊಟ್ಟಣ ವಿತರಿಸಿದ್ದೇನೆ’ ಎಂದು ಸಾಯಿನಾಥ ಶೇಟ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಂದೂರು: </strong>ಕುಂದಾಪುರದಲ್ಲಿ ಚಿನ್ನ, ಬೆಳ್ಳಿ ಒಡವೆ ಸಿದ್ಧಪಡಿಸಿ ಮಾರುವ ಸಾಯಿನಾಥ ಶೇಟ್ ಲಾಕ್ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಿರ್ಗತಿಕರು, ಕಡು ಬಡವರು, ಭಿಕ್ಷುಕರು ಮತ್ತು ಅಶಕ್ತರಿಗೆ ಉಚಿತ ಊಟ ನೀಡುತ್ತಿದ್ದಾರೆ. ಅವರು ನಡೆಸುತ್ತಿರುವ ಈ ಅನ್ನದಾಸೋಹ ಶನಿವಾರ 41 ದಿನ ಪೂರೈಸಿದೆ. ಯಾವುದೇ ಪ್ರಚಾರ ಬಯಸದೆ ಅವರು ಇದನ್ನು ಮಾಡುತ್ತಿದ್ದಾರೆ.</p>.<p>ಪ್ರತಿದಿನ 150 ಕ್ಕೂ ಅಧಿಕ ಊಟದ ಪೊಟ್ಟಣಗಳನ್ನು ಸ್ಕೂಟರ್ನಲ್ಲಿ ಹಾಕಿಕೊಂಡು ರಸ್ತೆ ಬದಿಯಲ್ಲಿ ಹಸಿದವರಿಗೆ ವಿತರಿಸುತ್ತಾರೆ.</p>.<p>ಶನಿವಾರ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಬಯಲಿನ ಗುಡಿಸಿಲಿನಲ್ಲಿ ದಿನ ಕಳೆಯುತ್ತಿರುವ ಅಲೆಮಾರಿಗಳಿಗೆ ಊಟದ ಪ್ಯಾಕೆಟ್ ವಿತರಿಸಿದರು.</p>.<p>’ನಾನು ದುಡಿಮೆಯಿಂದ ಜೀವನ ನಡೆಸುವ ಸಾಮಾನ್ಯ ವ್ಯಕ್ತಿ, ಹಸಿವೆ ಸಂಕಟದ ಅನುಭವ ಇದೆ.ಆದ್ದರಿಂದ ಲಾಕ್ಡೌನ್ ಸಂದರ್ಭ ಯಾರು ಕೂಡ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಹಲವರ ಸಹಕಾರದಿಂದ ಮತ್ತು ನನ್ನ ದುಡಿಮೆಯಿಂದ ಕೈಲಾದಷ್ಟು<br />ಸಹಾಯ ಮಾಡುತ್ತಿದ್ದೇನೆ. ಪ್ರತಿ ದಿನ 150 ಅಶಕ್ತರಿಗೆ ಊಟ ವಿತರಿಸುತ್ತಿದ್ದೇನೆ. ಹಿಂದಿನ ಲಾಕ್ಡೌನ್ ಅವಧಿಯಲ್ಲೂ ಆಹಾರದ ಪೊಟ್ಟಣ ವಿತರಿಸಿದ್ದೇನೆ’ ಎಂದು ಸಾಯಿನಾಥ ಶೇಟ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>