ಸಮಿತಿಯ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆ ವೇದಗಳ ಕಾಲದಿಂದಲೂ ಇತ್ತು ಎಂಬ ಕೇಂದ್ರ ಸರ್ಕಾರದ ಪುರಾತತ್ವ ಶಾಸ್ತ್ರ ವಿಭಾಗ ಮತ್ತು ಯುಜಿಸಿ ಸುತ್ತೋಲೆ ವಿವಾದಾತ್ಮಕ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಹೋದರತೆ ಅಂಶಗಳನ್ನು ಬುದ್ದನ ಭೋಧನೆಯಿಂದ ಹಾಗೂ ಪ್ರಜಾ ಪ್ರಭುತ್ವ ಪರಿಕಲ್ಪನೆಯನ್ನು ಅಮೆರಿಕಾ, ಇಂಗ್ಲೆಂಡ್, ಐರ್ಲೆಂಡ್ನ ಸಂವಿಧಾನದಿಂದ ಪಡೆದಿರುವುದಾಗಿ ಹೇಳಿದ್ದು ಈ ಬಗ್ಗೆ ದಾಖಲೆಗಳು ಇವೆ.