ಕೊರೊನಾದಿಂದ ಜನರು ಹೊತ್ತಿನ ಊಟಕ್ಕೂ ತತ್ತರಿಸುತ್ತಿರುವಾಗ ಬಿಜೆಪಿ ಸರ್ಕಾರದ ಸಚಿವರು, ಶಾಸಕರು ಲೂಟಿ ಮಾಡುವ ಕಾಯಕದಲ್ಲಿ ತೊಡಗಿರುವುದು ಅಸಹ್ಯ ಹುಟ್ಟಿಸುತ್ತಿದೆ. ಮಹಿಳೆಯರು ಮಂತ್ರಿಗಳಾದರೆ, ಶಾಸಕರಾದರೆ ಭ್ರಷ್ಟಾಚಾರ ಕಡಿಮೆಯಾದೀತು ಎಂಬ ಅಭಿಪ್ರಾಯ ಸಮಾಜದಲ್ಲಿದೆ. ಆದರೆ ಶಶಿಕಲಾ ಜೊಲ್ಲೆಯವರ ವಿಷಯದಲ್ಲಿ ಮಹಿಳೆಯರು ತಲೆತಗ್ಗಿಸಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.