ಶಂಕರ್ ಖಾರ್ವಿ ಅವರು ಮೀನುಗಾರರಾಗಿದ್ದು, ಅವರ ಕುಟುಂಬ ಅವರ ದುಡಿಮೆ ಯಿಂದಲೇ ಸಾಗಬೇಕು. ಅವರು ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜತೆಗೆ ಪಾರ್ವತಿ ಅವರಿಗೂ ಥೈರಾಯ್ಡ್ ಸಂಬಂಧಿ ಕಾಯಿಲೆ ಇದ್ದು, ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮಗ ಸುಭಾಸ್ ಖಾರ್ವಿಗೆ ಈ ರೀತಿಯ ನರ ಸಂಬಂಧಿ ರೋಗ ಕಾಣಿಸಿಕೊಂಡಿದ್ದು, ಚಿಕಿತ್ಸೆ ಕೊಡಿಸುವುದಕ್ಕೆ ಪೋಷಕರು ಪರದಾಡುತ್ತಿದ್ದಾರೆ.