ಉಡುಪಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ನೀಲಾವರ ಸುರೇಂದ್ರ ಅಡಿಗರು 32 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಚಲಾವಣೆಯಾದ 1,232 ಮತಗಳಲ್ಲಿ 432 ಮತಗಳನ್ನು ಪಡೆದು ಸತತ ಮೂರನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ.
ಪ್ರತಿಸ್ಪರ್ಧಿಗಳಾದ ಸುಬ್ರಹ್ಮಣ್ಯ ಬಾಸ್ರಿ 400 ಮತಗಳನ್ನು ಪಡೆದರೆ, ಡಾ.ಸುಬ್ರಹ್ಮಣ್ಯ ಭಟ್ 394 ಮತಗಳನ್ನು ಪಡೆದರು. 6 ಮತಗಳು ತಿರಸ್ಕೃತಗೊಂಡಿದ್ದವು. ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ಭಾರಿ ಪೈಪೋಟಿ ಇತ್ತು.