<p><strong>ಕಾರ್ಕಳ</strong>: ‘ನಮಗೆ ಬದುಕಿನಲ್ಲಿ ಉದ್ದೇಶವಿರಬೇಕು. ನಮ್ಮ ಮತ್ತು ಸುತ್ತುಮುತ್ಲು ಇರುವವರ ಬದುಕನ್ನು ಸುಂದರವಾಗಿಸುವುದು ನಮ್ಮ ಗುರಿಯಾಗಬೇಕು’ ಎಂದು ಬಿಗ್ ಎಫ್.ಎಂ. ರೇಡಿಯೊ ವಾಹಿನಿಯ ಆರ್ಜೆ ನಯನಾ ಹೇಳಿದರು.</p>.<p>ಇಲ್ಲಿನ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಹಾಗಣಪತಿ ದೇವಸ್ಥಾನ ಗಣಿತನಗರ, ಅಜೆಕಾರ್ ಪದ್ಮಗೋಪಾಲ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಮೌಲ್ಯಸುಧಾದ 44ನೇ ಸಂಚಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ‘ಯುವ ಮನಸ್ಸುಗಳಿಗೆ ಒಂದಿಷ್ಟು ಮಾತು’ ವಿಷಯದಲ್ಲಿ ಅವರು ಮಾತನಾಡಿದರು.</p>.<p>ನಾವು ಏನಾಗಬೇಕು, ಯಾರ ಜೊತೆ ಬೆರೆಯಬೇಕು ಎಂಬುದರಿಂದ ನಮ್ಮ ಆಯ್ಕೆಗಳು ನಿರ್ಧಾರವಾಗುತ್ತವೆ. ಪ್ರಯತ್ನದ ಮೇಲೆ ಎಲ್ಲವೂ ನಿಂತಿದೆ. ಅನಿವಾರ್ಯತೆಗಳೇ ಮನಸ್ಸನ್ನು ಗಟ್ಟಿಗೊಳಿಸುತ್ತವೆ ಎಂದರು.</p>.<p>ಅಜೆಕಾರ್ ಪದ್ಮಗೋಪಾಲ ಎಜುಕೇಷನ್ ಟ್ರಸ್ಟ್ನ ಟ್ರಸ್ಟಿಗಳಾದ ಅನಿಲ್ ಕುಮಾರ್ ಜೈನ್, ನಿತ್ಯಾನಂದ ಪ್ರಭು, ಉಪ ಪ್ರಾಂಶುಪಾಲ ಸಾಹಿತ್ಯ, ಉಷಾ ರಾವ್ ಯು. ಪಾಲ್ಗೊಂಡಿದ್ದರು. ರಸಾಯನ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರಜ್ವಲ್ ನಿರೂಪಿಸಿದರು.</p>
<p><strong>ಕಾರ್ಕಳ</strong>: ‘ನಮಗೆ ಬದುಕಿನಲ್ಲಿ ಉದ್ದೇಶವಿರಬೇಕು. ನಮ್ಮ ಮತ್ತು ಸುತ್ತುಮುತ್ಲು ಇರುವವರ ಬದುಕನ್ನು ಸುಂದರವಾಗಿಸುವುದು ನಮ್ಮ ಗುರಿಯಾಗಬೇಕು’ ಎಂದು ಬಿಗ್ ಎಫ್.ಎಂ. ರೇಡಿಯೊ ವಾಹಿನಿಯ ಆರ್ಜೆ ನಯನಾ ಹೇಳಿದರು.</p>.<p>ಇಲ್ಲಿನ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಹಾಗಣಪತಿ ದೇವಸ್ಥಾನ ಗಣಿತನಗರ, ಅಜೆಕಾರ್ ಪದ್ಮಗೋಪಾಲ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಮೌಲ್ಯಸುಧಾದ 44ನೇ ಸಂಚಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ‘ಯುವ ಮನಸ್ಸುಗಳಿಗೆ ಒಂದಿಷ್ಟು ಮಾತು’ ವಿಷಯದಲ್ಲಿ ಅವರು ಮಾತನಾಡಿದರು.</p>.<p>ನಾವು ಏನಾಗಬೇಕು, ಯಾರ ಜೊತೆ ಬೆರೆಯಬೇಕು ಎಂಬುದರಿಂದ ನಮ್ಮ ಆಯ್ಕೆಗಳು ನಿರ್ಧಾರವಾಗುತ್ತವೆ. ಪ್ರಯತ್ನದ ಮೇಲೆ ಎಲ್ಲವೂ ನಿಂತಿದೆ. ಅನಿವಾರ್ಯತೆಗಳೇ ಮನಸ್ಸನ್ನು ಗಟ್ಟಿಗೊಳಿಸುತ್ತವೆ ಎಂದರು.</p>.<p>ಅಜೆಕಾರ್ ಪದ್ಮಗೋಪಾಲ ಎಜುಕೇಷನ್ ಟ್ರಸ್ಟ್ನ ಟ್ರಸ್ಟಿಗಳಾದ ಅನಿಲ್ ಕುಮಾರ್ ಜೈನ್, ನಿತ್ಯಾನಂದ ಪ್ರಭು, ಉಪ ಪ್ರಾಂಶುಪಾಲ ಸಾಹಿತ್ಯ, ಉಷಾ ರಾವ್ ಯು. ಪಾಲ್ಗೊಂಡಿದ್ದರು. ರಸಾಯನ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರಜ್ವಲ್ ನಿರೂಪಿಸಿದರು.</p>