ಉಡುಪಿಯ ಕರಾವಳಿ ಬೈಪಾಸ್ ಮೇಲೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಸರ್ವೀಸ್ ರಸ್ತೆಯಲ್ಲಿರುವ ಪಾದಚಾರಿ ಮಾರ್ಗದಲ್ಲಿ ಸಿಮೆಂಟ್ ಸ್ಲಾಬ್ಗಳು ಅಲ್ಲಲ್ಲಿ ಮುರಿದು ಹೋಗಿವೆ. ಪರಿಣಾಮ ರಾತ್ರಿಯ ಹೊತ್ತು ಉಡುಪಿಯಿಂದ ಅಂಬಲಪಾಡಿ ಕಡೆಗೆ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ರಾತ್ರಿ ಬೀದಿದೀಪದ ವ್ಯವಸ್ಥೆಯೂ ಸಮರ್ಪಕವಾಗಿರದೆ ಹಲವರು ನಡೆಯುವಾಗ ಮುರಿದುಹೋದ ಸ್ಲಾಬ್ ಗಮನಿಸಿದೆ ಬಿದ್ದು ಕೈಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ವೃದ್ಧರು, ಮಹಿಳೆಯರು ಮಕ್ಕಳಿಗೆ ಬಹಳ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುರಿದುಹೋಗಿರುವ ಸಿಮೆಂಟ್ ಸ್ಲಾಬ್ಗಳನ್ನು ಬದಲಿಸಬೇಕು.