ಜಾಲತಾಣದಲ್ಲಿ ಯೋಧರ ವಿರುದ್ಧವಾಗಿ ಹಾಗೂ ಪಾಕಿಸ್ತಾನದ ಪರವಾಗಿ ಪೋಸ್ಟ್ ಹಾಕಿರುವ ರಾಧಾಕೃಷ್ಣ ನಾಯಕ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಮಧ್ಯೆ ಸಿದ್ದರಾಮಯ್ಯ ಅವರು ರಾಧಾಕೃಷ್ಣನ ಪರವಾಗಿ ಟ್ವಿಟರ್ನಲ್ಲಿ ಬೆಂಬಲ ಸೂಚಿಸಿರುವುದು ದೇಶದ್ರೋಹಿಗೆ ಬೆಂಬಲ ನೀಡಿದಂತಾಗಿದೆ. ಈ ಸಂಬಂಧ ದೇಶದ್ರೋಹಕ್ಕೆ ನೆರವು ಹಾಗೂ ಪ್ರಚೋದನೆ ನೀಡಿದ ಆರೋಪದ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ದೂರು ಸಲ್ಲಿಸಲಾಯಿತು ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ.