ಶಾಸಕ ರಘುಪತಿ ಭಟ್ ಮಾತನಾಡಿ, ನಗರಸಭೆಯಿಂದ ಅನುಮತಿ ಪಡೆಯದೆ ಮೂರು ತಳ ಅಂತಸ್ತು ನಿರ್ಮಿಸಲು ಸಂಸ್ಥೆ ಮುಂದಾಗಿದ್ದು, ಕಾನೂನು ಬಾಹಿರ ಕಾರಣಕ್ಕೆ ಕಾಮಗಾರಿಗೆ ತಡೆನೀಡಲಾಗಿದೆ. ಈಗ ದೊಡ್ಡ ಗುಂಡಿ ನಿರ್ಮಾಣವಾಗಿದ್ದು, 15 ದಿನದೊಳಗೆ ಮುಚ್ಚಬೇಕು. ಇಲ್ಲದಿದ್ದರೆ ₹ 65 ಲಕ್ಷವನ್ನು ನಗರಸಭೆಗೆ ಪಾವತಿಸಬೇಕು ಎಂದು ನೋಟಿಸ್ ಜಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.