ಗೂಳಿಹಟ್ಟಿ ಶೇಖರ್ಗೆ ತಪ್ಪು ಮಾಹಿತಿ: ಗೂಳಿಹಟ್ಟಿ ಶೇಖರ್ ಆರ್ಎಸ್ಎಸ್ ಕಚೇರಿಗೆ ಯಾವಾಗ ಬಂದಿದ್ದಾರೊ ಗೊತ್ತಿಲ್ಲ. ಆರ್ಎಸ್ಎಸ್ ಶಾಖೆಗೆ ಹೋದವರು ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಎಲ್ಲ ವರ್ಗದವರು ಒಟ್ಟಾಗಿ ಇರಬೇಕು ಅನ್ನೋದು ಆರ್ಎಸ್ಎಸ್ ಆಶಯವಾಗಿದೆ. ಭಾರತದ ಅಭ್ಯುದಯವನ್ನು ಆರ್ಎಸ್ಎಸ್ ಬಯಸುತ್ತದೆ. ಗೂಳಿಹಟ್ಟಿ ಶೇಖರ್ಗೆ ಅರ್ಎಸ್ಎಸ್ ಬಗ್ಗೆ ತಪ್ಪು ಮಾಹಿತಿ ಇದೆ, ಅವರು ಸಂಘಕ್ಕೆ ಬಂದು ನೋಡಲಿ ಎಂದು ಶೋಭಾ ಕರಂದ್ಲಾಜೆ ಹೇಳಿದರು.