ಬ್ರಹ್ಮಾವರ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಕ್ಟೋಬರ್ 9ರಂದು ಒಂದು ದಿನದ ವೈಜ್ಞಾನಿಕ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ ನಡೆಯಲಿದೆ.
ತರಬೇತಿಯಲ್ಲಿ ಅಣಬೆ ಬೇಸಾಯ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನೀಡಲಾಗುವುದು. ಅಕ್ಟೋಬರ್ 5ರೊಳಗೆ ಮೊದಲು ನೋಂದಾಯಿಸಿದ 30 ಮಂದಿ ಗ್ರಾಮೀಣ ಯುವಕ ಮತ್ತು ಯುವತಿಯರಿಗೆ ಆದ್ಯತೆ ನೀಡಲಾಗುವುದು. ನೋಂದಾವಣೆಯ ಶುಲ್ಕ ₹300. ಮಾಹಿತಿಗೆ 91641 80161 ಸಂಪರ್ಕಿಸಬಹುದು.