ತರಬೇತಿ ಅವಧಿಯಲ್ಲಿ ನುರಿತ ತಜ್ಞರು ರಾಷ್ಟ್ರೀಯ ಹಿತಾಸಕ್ತಿ, ಸಮಾಜ ಸೇವೆ ಕುರಿತು ಉಪನ್ಯಾಸ ನೀಡಲಿದ್ದಾರೆ. ನಾಯಕತ್ವ, ವ್ಯಕ್ತಿತ್ವ ವಿಕಸನ, ಧನಾತ್ಮಕ ಚಿಂತನೆ, ಜಲಶಕ್ತಿ ಅಭಿಯಾನ, ಮಳೆ ನೀರು ಸಂಗ್ರಹದ ಮಹತ್ವ, ಸಂವಹನ ಕೌಶಲ, ಭಾಷಣ ಕಲೆ, ಭ್ರಷ್ಟಾಚಾರ ನಿರ್ಮೂಲನೆ, ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಭಕ್ತಿ, ಸಂಸ್ಕೃತಿ, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮ, ಸ್ವ ಉದ್ಯೋಗ, ಸರ್ಕಾರದ ಯೋಜನೆಗಳ ಕುರಿತು ಶಿಬಿರದಲ್ಲಿ ಯುವಜನಾಂಗಕ್ಕೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.