ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Last Updated 15 ಜೂನ್ 2022, 5:34 IST
ಅಕ್ಷರ ಗಾತ್ರ

ಕಾರ್ಕಳ: 16 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಬೆಳ್ತಂಗಡಿಯ ಶಕ್ತಿವೇಲು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

2006ರ ಫೆಬ್ರುವರಿ 7ರಂದು ಕುಕ್ಕಂದೂರು ಗ್ರಾಮದ ಹುಡ್ಕೊ ಕಾಲೊನಿಯ ಪ್ರಶಾಂತ ನಾಯ್ಕ್ ಅವರಿಗೆ ಜೀವ ಬೆದರಿಕೆ ಹಾಕಿದ್ದು, ಪ್ರಕರಣ ದಾಖಲಾಗಿತ್ತು.

ಆರೋಪಿ ಶಕ್ತಿವೇಲು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದನು.ಆರೋಪಿ ಬೆಳ್ತಂಗಡಿಗೆ ಬಂದ ಮಾಹಿತಿ ಪಡೆದ ಪೊಲೀಸರು ಬಂಧಿಸಿ, ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಶಕ್ತಿವೇಲು ವಿರುದ್ಧ ಪಾಂಡೇಶ್ವರ, ಕದ್ರಿ, ಕಂಕನಾಡಿ, ಬೆಳ್ತಂಗಡಿ, ಉಡುಪಿ ಮತ್ತಿತರ ಠಾಣೆಗಳಲ್ಲಿ ಪ್ರಕರಣಗಳಿವೆ.

ಪಿಎಸ್‌ಐ ದಾಮೋದರ್, ಎಎಸ್‌ಐ ರಾಜೇಶ್ ಪಿ, ಸಿಬ್ಬಂದಿ ಪ್ರಸನ್ನ, ಸಿದ್ದರಾಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT