ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ‘ದಾದಿಯರ ಉತ್ತಮ ಶುಶ್ರೂಷೆ ಹಾಗೂ ಆರೈಕೆ ರೋಗಿಗಳು ಶೀಘ್ರ ಚೇತರಿಸಿಕೊಳ್ಳಲು ಸಹಕಾರಿಯಾಗುತ್ತದೆ. ರೋಗಿಗಳೊಂದಿಗೆ ಹೆಚ್ಚು ಸಮಯ ಕಳೆಯುವ ದಾದಿಯರು ಕಾಯಿಲೆಗಳು ಗುಣವಾಗಲು ಹೆಚ್ಚು ಶ್ರಮ ಹಾಕುತ್ತಾರೆ ಎಂದು ಶ್ಲಾಘಿಸಿದ ಅವರು, ಉಪಶಾಮಕ ಆರೈಕೆ ಸೇವೆಯ ಅರಿವು ರಾಜ್ಯ ಮತ್ತು ದೇಶದಲ್ಲಿ ಹೆಚ್ಚಬೇಕು ಎಂದರು.