ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013- 14ನೇ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಶಿಕ್ಷಕರಿಗೆ ₹ 13,500, ಶಿಕ್ಷಕೇತರ ಸಿಬ್ಬಂದಿಗೆ ₹ 8ರಿಂದ ₹9ಸಾವಿರ ಗೌರವಧನ ಜಾರಿಗೊಳಿಸಿದ್ದು, ಶಿಶು ಕೇಂದ್ರಿಕೃತ ಸಹಾಯಧನ ಯೋಜನೆಯಡಿ 141 ವಿಶೇಷ ಶಾಲೆಗಳು ಅನುದಾನ ಬಿಡುಗಡೆಯಾಗುತ್ತಿದೆ. ಬಳಿಕ ಗೌರವ ಧನ ಏರಿಕೆಯಾಗಿಲ್ಲ. ಕನಿಷ್ಠ ವೇತನವೂ ಸಿಗದೆ ಜೀವನ ನಿರ್ವಹಣೆಗೆ ಶಿಕ್ಷಕರಿಗೆ ಕಷ್ಟವಾಗಿದೆ ಎಂದರು.