ಕೋವಿಡ್ ಹಿನ್ನೆಲೆಯಲ್ಲಿ ಕಲಾ ತಂಡಗಳ ಪ್ರದರ್ಶನ, ಟ್ಯಾಬ್ಲೊಗಳು ಇರುವುದಿಲ್ಲ. ಸಂಪ್ರದಾಯದಂತೆ ಚಂಡೆ, ವಾದ್ಯ, ಭಜನೆ, ಸಂಕೀರ್ತನೆ ಇರಲಿದೆ. ತೆರೆದ ವಾಹನದಲ್ಲಿ ಪರ್ಯಾಯ ಶ್ರೀಗಳನ್ನು ರಥಬೀದಿಗೆ ಕರೆತರಲಾಗುವುದು. 200 ಮಂದಿ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಸಂಜೆ 5.20ಕ್ಕೆ ಮೆರವಣಿಗೆ ರಥಬೀದಿ ತಲುಪಲಿದ್ದು, 6ಕ್ಕೆ ಪೌರ ಸಮ್ಮಾನ ಹಾಗೂ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.