ಉಡುಪಿ: ಕಲೆ, ಸಾಹಿತ್ಯ, ಶಿಕ್ಷಣ, ಸಾಮಾಜಿಕ, ಪತ್ರಿಕೋದ್ಯಮ ಹೀಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ 2020ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
ದೈವಾರಾಧನೆ: ಹೆಬ್ರಿ ತಾಲ್ಲೂಕಿನ ಅಲ್ಬಾಡಿ ಗ್ರಾಮದ ರಂಗ ಪಾಣ, ಮುದ್ರಾಡಿಯ ಮಂಜುನಾಥ್ ಶೇರಿಗಾರ, ಕಾರ್ಕಳ ತಾಲ್ಲೂಕು ಕಾಂತಾವರದ ಮೋಂಟು ಪಾಣರ.
ರಂಗಭೂಮಿ: ಬ್ರಹ್ಮಾವರದ ಸಾಲಿಗ್ರಾಮದ ಪಾರಂಪಳ್ಳಿ ನರಸಿಂಹ ಐತಾಳ್, ಕಾರ್ಕಳ ತಾಲ್ಲೂಕಿನ ಎಳ್ಳಾರೆಯ ವಸಂತಿ ಪೂಜಾರಿ ಮುನಿಯಾಲು, ಕಾಪು ತಾಲ್ಲೂಕಿನ ಮೂಡುಬೆಳ್ಳೆಯ ದಿನಕರ ಭಂಡಾರಿ ಕಣಜಾರು.
ಸಾಹಿತ್ಯ: ಕುರ್ಕಾಲು ಬಿಳಿಯಾರಿನ ನವೀನ್ ಸುವರ್ಣ ಪಡ್ರೆ.
ಯಕ್ಷಗಾನ: ಬ್ರಹ್ಮಾವರ ತಾಲ್ಲೂಕು ಕೋಟದ ಹಂದಟ್ಟಿನ ಸುದರ್ಶನ ಉರಾಳ, ಚೇರ್ಕಾಡಿಯ ಶಶಿಕಲಾ ಪ್ರಭು, ಕುಂದಾಪುರ ತಾಲ್ಲೂಕಿನ ನಾಡ ಗ್ರಾಮದ ನಾಗೇಶ್ ಗಾಣಿಗ.