ಸೆ.3 ವಿಟ್ಲಪಿಂಡಿ ಉತ್ಸವದಂದು ದಿನವಿಡೀ ಶ್ರೀಕೃಷ್ಣ ಲೀಲೋತ್ಸವಗಳು ನಡೆಯಲಿದೆ. ಭಕ್ತಿಪ್ರಧಾನ, ಸಾಂಸ್ಕೃತಿಕ, ಮನರಂಜನೆಯ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 6ಕ್ಕೆ ಮಹಾಮಂಗಳಾರತಿ, 10.30ಕ್ಕೆ ಕನಕಗೋಪುರದ ಎದುರು ದಹಿಹಂಡಿ ಉದ್ಘಾಟನೆ, 11ಕ್ಕೆ ರಾಜಾಂಗಣದಲ್ಲಿ ಕೃಷ್ಣ ಪ್ರಸಾದ ಉದ್ಘಾಟನೆ ಹಾಗೂ ಭಕ್ತರಿಗೆ ಹಾಲುಪಾಯಸ ಹಾಗೂ ಗುಂಡಿಟ್ಟು ಲಡ್ಡಿಗೆ ವಿಶೇಷ ಪ್ರಸಾದ ವಿತರಿಸಲಾಗುವುದು ಎಂದರು.