ಉಡುಪಿ: ಜೀವನದಲ್ಲಿ ಪ್ರಯತ್ನವೆಂಬ ಮಥನ ನಡೆಸಿದಾಗ ಮಾತ್ರ ಸಾಧನೆಯೆಂಬ ಅಮೃತತ್ವ ಪಡೆಯಲು ಸಾಧ್ಯ ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು.
ಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವ ಕಾರ್ಯಕ್ರಮವಾದ ‘ವಿಶ್ವಾರ್ಪಣಂ' ಸಮಾರಂಭದಲ್ಲಿ ಮಾತನಾಡಿದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಎಲ್ಲರೂ ಸಮಾನತೆಯನ್ನು ಸಾಧಿಸಲು ಕರೆನೀಡಿದರು.
ಅದಮಾರು ಮಠದ ಶಿಕ್ಷಣ ಸಂಸ್ಥೆಗಳ ಹಣಕಾಸು ಸಲಹೆಗಾರರಾದ ಪಿ.ಶ್ರೀನಿವಾಸ ರಾವ್, ಕೃಷ್ಣ ಮಠದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸುತ್ತಿರುವ ಕೋಟೇಶ್ವರ ಕೆ.ಆರ್.ಪ್ರಸಾದ ಕಲ್ಕೂರ ಹಾಗೂ ಅಂಚೆ ಪೇದೆ ನರಸಿಂಹ ನಾಯಕ್ ಅವರಿಗೆ ಸನ್ಮಾನಿಸಲಾಯಿತು.
ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ‘ಶಿಕ್ಷಣ ವಿಮರ್ಶೆ, ಮಕ್ಕಳಿಗೆ ಇಂತಹ ಶಿಕ್ಷಣ ಬೇಕು’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಭ್ಯಾಗತರಾಗಿ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ ಅಸ್ರಣ್ಣ ಪಾಲ್ಗೊಂಡಿದ್ದರು.