<p><strong>ಉಡುಪಿ: </strong>ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ನ ಉದ್ಘಾಟನಾ ಸಮಾರಂಭ ಈಚೆಗೆ ಕಿದಿಯೂರಿನ ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆಯ ಸಭಾಂಗಣದಲ್ಲಿ ಜರುಗಿತು.</p>.<p>ಮ್ಯಾನೇಜಿಂಗ್ ಟ್ರಸ್ಟಿ ಕೆ.ಜೆ.ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮದಲ್ಲಿಆಶೀರ್ವಚನ ನೀಡಿ ಮಾತನಾಡಿ, ಕೆ.ಜೆ. ಗಣೇಶ್ ಆಚಾರ್ಯ ಹಾಗೂ ಸಹೋದರರ ಸಾಧನೆ ಸಫಲವಾಗಲಿ. ಈ ಮೂಲಕ ಯಕ್ಷಗಾನ ಜಗತ್ತನ್ನು ಬೆಳಗುವ ದೀಪವಾಗಲಿ ಎಂದು ಹರಸಿದರು.</p>.<p>ಪ್ರೊ.ಉದ್ಯಾವರ ಮಾಧವ ಆಚಾರ್ಯರು ಮಾತನಾಡಿ, ಒಳ್ಳೆಯ ಉದ್ದೇಶದಿಂದ ಮುಂದಡಿ ಇಡುವಾಗ ಶುಭ ಹಾರೈಸುವುದು ಎಲ್ಲರ ಕರ್ತವ್ಯ. ಕಲೆಯ ಬಗ್ಗೆ, ಸಮಾಜದ ಬಗ್ಗೆ ನಿಷ್ಠೆಯನ್ನು ತೋರಿ, ಹಿರಿಯರು ಬೆಳೆಸಿದ ಪರಂಪರೆ ಉಳಿಸಿ ಮುನ್ನಡೆಯಿರಿ ಎಂದು ಶುಭ ಹಾರೈಸಿದರು.</p>.<p>ಪ್ರೊ.ಎಂ.ಎಲ್. ಸಾಮಗ ಮಾತನಾಡಿ, ತಂದೆಯಂತೆ ಮಕ್ಕಳು ಸೌಜನ್ಯವಂತರಾಗಿದ್ದು, ಯಕ್ಷಗಾನ ಹಿಮ್ಮೇಳದಲ್ಲಿ ಕೆ.ಜೆ ಸಹೋದರರು ಎಂದೇ ಪ್ರಸಿದ್ಧರಾಗಿದ್ದಾರೆ ಎಂದು ಹಾರೈಸಿದರು.</p>.<p>ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಅಂಬಲಪಾಡಿ ಯಕ್ಷಗಾನ ಸಂಘಕ್ಕೆ ಕೆ.ಜೆ ಅವರ ಕುಟುಂಬ ಸಮರ್ಪಿಸಿಕೊಂಡಿದೆ ಎಂದರು.</p>.<p>ಎಂ.ಕೆ.ರಮೇಶ್ ಆಚಾರ್ಯ, ಉದಯ ಕುಮಾರ್ ಶೆಟ್ಟಿ, ಗುಂಡು ಬಿ.ಅಮೀನ್, ಪ್ರೊ.ರಾಧಾಕೃಷ್ಣ ಆಚಾರ್ಯ, ನಂದಕುಮಾರ್ ಶುಭ ಹಾರೈಸಿದರು. ದಾಮೋದರ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಕೆ.ಜೆ. ಕೃಷ್ಣ, ಕೆ.ಜೆ.ಸುಧೀಂದ್ರ, ಕೆ.ಜಗದೀಶ್ ಆಚಾರ್ಯ, ಡಾ.ನಿ.ಬಿ.ವಿಜಯ ಬಲ್ಲಾಳರು ಉಪಸ್ಥಿತರಿದ್ದರು.</p>.<p>ಕೆ.ಜೆ ಸಹೋದರರಿಂದ ಯಕ್ಷಗಾಯನ ನಡೆಯಿತು. ಪ್ರತಿಮಾ, ಮಾನ್ಯ ಪೀಠಿಕಾ ಸ್ತ್ರೀವೇಷ ನೃತ್ಯ ಅಭಿನಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ನ ಉದ್ಘಾಟನಾ ಸಮಾರಂಭ ಈಚೆಗೆ ಕಿದಿಯೂರಿನ ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆಯ ಸಭಾಂಗಣದಲ್ಲಿ ಜರುಗಿತು.</p>.<p>ಮ್ಯಾನೇಜಿಂಗ್ ಟ್ರಸ್ಟಿ ಕೆ.ಜೆ.ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮದಲ್ಲಿಆಶೀರ್ವಚನ ನೀಡಿ ಮಾತನಾಡಿ, ಕೆ.ಜೆ. ಗಣೇಶ್ ಆಚಾರ್ಯ ಹಾಗೂ ಸಹೋದರರ ಸಾಧನೆ ಸಫಲವಾಗಲಿ. ಈ ಮೂಲಕ ಯಕ್ಷಗಾನ ಜಗತ್ತನ್ನು ಬೆಳಗುವ ದೀಪವಾಗಲಿ ಎಂದು ಹರಸಿದರು.</p>.<p>ಪ್ರೊ.ಉದ್ಯಾವರ ಮಾಧವ ಆಚಾರ್ಯರು ಮಾತನಾಡಿ, ಒಳ್ಳೆಯ ಉದ್ದೇಶದಿಂದ ಮುಂದಡಿ ಇಡುವಾಗ ಶುಭ ಹಾರೈಸುವುದು ಎಲ್ಲರ ಕರ್ತವ್ಯ. ಕಲೆಯ ಬಗ್ಗೆ, ಸಮಾಜದ ಬಗ್ಗೆ ನಿಷ್ಠೆಯನ್ನು ತೋರಿ, ಹಿರಿಯರು ಬೆಳೆಸಿದ ಪರಂಪರೆ ಉಳಿಸಿ ಮುನ್ನಡೆಯಿರಿ ಎಂದು ಶುಭ ಹಾರೈಸಿದರು.</p>.<p>ಪ್ರೊ.ಎಂ.ಎಲ್. ಸಾಮಗ ಮಾತನಾಡಿ, ತಂದೆಯಂತೆ ಮಕ್ಕಳು ಸೌಜನ್ಯವಂತರಾಗಿದ್ದು, ಯಕ್ಷಗಾನ ಹಿಮ್ಮೇಳದಲ್ಲಿ ಕೆ.ಜೆ ಸಹೋದರರು ಎಂದೇ ಪ್ರಸಿದ್ಧರಾಗಿದ್ದಾರೆ ಎಂದು ಹಾರೈಸಿದರು.</p>.<p>ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಅಂಬಲಪಾಡಿ ಯಕ್ಷಗಾನ ಸಂಘಕ್ಕೆ ಕೆ.ಜೆ ಅವರ ಕುಟುಂಬ ಸಮರ್ಪಿಸಿಕೊಂಡಿದೆ ಎಂದರು.</p>.<p>ಎಂ.ಕೆ.ರಮೇಶ್ ಆಚಾರ್ಯ, ಉದಯ ಕುಮಾರ್ ಶೆಟ್ಟಿ, ಗುಂಡು ಬಿ.ಅಮೀನ್, ಪ್ರೊ.ರಾಧಾಕೃಷ್ಣ ಆಚಾರ್ಯ, ನಂದಕುಮಾರ್ ಶುಭ ಹಾರೈಸಿದರು. ದಾಮೋದರ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಕೆ.ಜೆ. ಕೃಷ್ಣ, ಕೆ.ಜೆ.ಸುಧೀಂದ್ರ, ಕೆ.ಜಗದೀಶ್ ಆಚಾರ್ಯ, ಡಾ.ನಿ.ಬಿ.ವಿಜಯ ಬಲ್ಲಾಳರು ಉಪಸ್ಥಿತರಿದ್ದರು.</p>.<p>ಕೆ.ಜೆ ಸಹೋದರರಿಂದ ಯಕ್ಷಗಾಯನ ನಡೆಯಿತು. ಪ್ರತಿಮಾ, ಮಾನ್ಯ ಪೀಠಿಕಾ ಸ್ತ್ರೀವೇಷ ನೃತ್ಯ ಅಭಿನಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>