ಕುಂದಾಪುರ: ಮೂಡ್ಲಕಟ್ಟೆಯ ಎಂಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ, ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯೋಗ ಶಿಕ್ಷಕ ಪ್ರವೀಣ್, ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಮನಸ್ಸು, ದೇಹ, ಚಿಂತನೆ, ಕ್ರಿಯೆ ಹಾಗೂ ಸಂಯಮವನ್ನು ಕೂಡಿಸುವ ಯೋಗ ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಯೋಗಪಟುವಾಗುವ ಬದಲು ಯೋಗಿಗಳಾಗುವತ್ತ ಹೆಚ್ಚು ಗಮನ ವಹಿಸಬೇಕು ಎಂದರು.
ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ, ಅಕಾಡೆಮಿಕ್ ಡೀನ್ ಡಾ. ಪ್ರತಿಭಾ ಪಟೇಲ್, ಡೀನ್ ಪ್ಲೇಸ್ಮೆಂಟ್ ಪ್ರೊಫೆಸರ್ ಅಮೃತಮಾಲ , ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿಸೋಜಾ ಇದ್ದರು.
ಸಭಾ ಕಾರ್ಯಕ್ರಮದ ನಂತರ ಆಯೋಜಿಸಲಾದ ಯೋಗ ತರಬೇತಿಯಲ್ಲಿ ಕಾಲೇಜಿನ ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಅಮರ್ ಸ್ವಾಗತಿಸಿದರು, ನಚಿಕೇತನ್ ವಂದಿಸಿದರು, ಸುಜಿತ್ ನಿರೂಪಿಸಿದರು.