<p><strong>ಸುಬ್ರಹ್ಮಣ್ಯ:</strong> ಶನಿವಾರ ರಾತ್ರಿ 10 ಗಂಟೆಗೆ ಮುಳುಗಡೆಗೊಂಡ ಕುಮಾರಧಾರ ಸೇತುವೆ ಭಾನುವಾರ ಬೆಳಿಗ್ಗೆ 11ಗಂಟೆಗೆ ನೀರಿನ ಹರಿವಿನ ಮಟ್ಟ ಇಳಿಕೆಗೊಂಡು ಮತ್ತೆ ವಾಹನ ಸಂಚಾರಕ್ಕೆ ಮುಕ್ತವಾಯಿತು.<br /> <br /> ಸುಮಾರು 13 ಗಂಟೆಗಳ ಕಾಲ ಬೆಂಗಳೂರು, ಹಾಸನ, ಮಂಗಳೂರು, ಧರ್ಮಸ್ಥಳಗಳಿಂದ ಬಂದ ನೂರಾರು ವಾಹನಗಳಿಂದ ಸಾವಿರಾರು ಭಕ್ತರು ಅನ್ನ ನೀರಿಗಾಗಿ ಪರದಾಟ ನಡೆಸಿದರೆ, ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಕಾಡನ್ನೆ ಆಶ್ರಯಿಸಿದರು. ವಾಹನದಲ್ಲೇ ಆಸರೆ ಪಡೆದರು.<br /> <br /> ಶುಕ್ರವಾರ ಸಂಜೆ ಸೇತುವೆ ಮುಳುಗಿದಾಗ ಶಾಲಾ ವಿದ್ಯಾರ್ಥಿಗಳು ಮನೆ ಸೇರಲಾಗದೆ ಸುಬ್ರಹ್ಮಣ್ಯದಲ್ಲೇ ರಾತ್ರಿ ಕಳೆದರೆ, ಕೆಲವು ವಿದ್ಯಾರ್ಥಿಗಳು ದುಬಾರಿ ಹಣ ತೆತ್ತು ಪಂಜ ಮಾರ್ಗವಾಗಿ ತೆರಳಿ ತಡ ರಾತ್ರಿ ಮನೆ ಸೇರಿದರು.<br /> <br /> ಎರಡು ವರ್ಷಗಳ ಹಿಂದೆ 16 ಬಾರಿ ಕುಮಾರಧಾರ ಸೇತುವೆ ಮುಳುಗಡೆಗೊಂಡು ಜನರು ಕಷ್ಟ ಅನುಭವಿಸಿದ್ದನ್ನು ಮಾಧ್ಯಮಗಳು ಹಲವು ಬಾರಿ ಎಚ್ಚರಿಸಿದ್ದರೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ ಸೇತುವೆ ಮಾತ್ರ ಮೇಲ್ದರ್ಜೆಗೇರದೆ ಕೂತಿದೆ. ರಾಜಕಾರಣಿಗಳು ಚುನಾವಣಾ ಸಮಯದಲ್ಲಿ `ಸೇತುವೆಯನ್ನು ಮೇಲ್ದರ್ಜೆಗೆ ಏರುಸುತ್ತೇವೆ' ಎಂದು ಆಶ್ವಾಸನೆ ಕೊಡುತ್ತಾರೆ ಹೊರತು ಅನುಷ್ಠಾನ ಮಾತ್ರ ಆಗುತ್ತಿಲ್ಲ.<br /> <br /> <strong>ಬಿಕೋ ಎನ್ನುತ್ತಿರುವ ಸುಬ್ರಹ್ಮಣ್ಯ:</strong> ಸುಬ್ರಹ್ಮಣ್ಯ ಪರಿಸರದ ಘಟ್ಟ ಪ್ರದೇಶ ಹಾಗೂ ಕುಮಾರ ಪರ್ವತದಲ್ಲಿ ನಿರಂತರ ಮಳೆ ಸುರಿದಾಗ ಕುಮಾರಧಾರ ನದಿಯ ಸೇತುವೆ ಮಳುಗಡೆಯಾಗುವುದು. ಈ ಸುದ್ದಿ ಪತ್ರಿಕೆ ಹಾಗೂ ಟಿ.ವಿ ಮಾಧ್ಯಮದಲ್ಲಿ ಪ್ರಸಾರಗೊಂಡಾಗ ದೂರದ ಯಾತ್ರಿಕರು ದೂರವಾಣಿ ಮೂಲಕ ದೇವಸ್ಥಾನಕ್ಕೆ ಬರಬಹುದೇ? ಸೇತುವೆ ಮುಳುಗಡೆಯಾಗಿದೆಯೇ? ಎಂದು ವಿಚಾರಿಸುತ್ತಾರೆ. ಮಳೆಗಾಲದ ಈ ಅವಧಿಯಲ್ಲಿ ದೇಗುಲಕ್ಕೆ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ.<br /> <br /> ಕುಮಾರಧಾರ ಸೇತುವೆ ಮುಳುಗಿದಾಗ ಪತ್ರಿಕೆ ಹಾಗೂ ಟಿ.ವಿ ಮಾಧ್ಯಮದಲ್ಲಿ ದ್ವೀಪವಾದ ಸುಬ್ರಹ್ಮಣ್ಯ ಎಂದು ಸುದ್ದಿ ಬರುತ್ತದೆ. ನೀರು ಕಡಿಮೆಯಾದಾಗ ಯಾರೂ ಸುದ್ದಿ ಮಾಡುವುದಿಲ್ಲ. ಇದರಿಂದಾಗಿ ಕಳೆದ 2 ತಿಂಗಳಿಂದ ಯಾತ್ರಿಕರು ಬಾರದೆ ವ್ಯಾಪಾರವಿಲ್ಲದೆ ಜೀವನ ಸಾಗಿಸಲು ಕಷ್ಟವಾಗುತ್ತಿದೆ.<br /> <strong> -ವೆಂಕಟೇಶ್.ಎಚ್.ಎ. ಹಣ್ಣುಕಾಯಿ ವ್ಯಾಪಾರಿ</strong></p>.<p>ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನಿಂದ ನಮ್ಮ ವಾಹನದಲ್ಲಿ ಕುಟುಂಬ ಸಮೇತರಾಗಿ ಗುಂಡ್ಯ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಬಂದಾಗ ಕುಮಾರಧಾರ ಸೇತುವೆ ಮುಳುಗಡೆಗೊಂಡು ಅಲ್ಲೇ ವಾಹನದಲ್ಲಿ ಕಾಲ ಕಳೆಯಬೇಕಾಯಿತು.<br /> <br /> ರಾತ್ರಿ 10.30 ಗಂಟೆಗೆ ಬಂದವರು ಅನ್ಯಮಾರ್ಗ ತಿಳಿಯದೆ ಕಾಡಿನ ಮಧ್ಯದಲ್ಲೇ ಗಾಳಿ ಮಳೆಗೆ ವಾಹನದಲ್ಲಿ ಮಲಗಿ ಆಸರೆ ಪಡೆದೆವು. ನಮ್ಮಂತಹ ಹಲವು ಕುಟುಂಬಗಳದ್ದು ಇದೇ ಸ್ಥಿತಿ. ದಯವಿಟ್ಟು ಸೇತುವೆಯನ್ನು ಮೇಲ್ದರ್ಜೆಗೆ ಏರಿಸಿ. <br /> <strong>-ದೇವಣ್ಣ ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಬ್ರಹ್ಮಣ್ಯ:</strong> ಶನಿವಾರ ರಾತ್ರಿ 10 ಗಂಟೆಗೆ ಮುಳುಗಡೆಗೊಂಡ ಕುಮಾರಧಾರ ಸೇತುವೆ ಭಾನುವಾರ ಬೆಳಿಗ್ಗೆ 11ಗಂಟೆಗೆ ನೀರಿನ ಹರಿವಿನ ಮಟ್ಟ ಇಳಿಕೆಗೊಂಡು ಮತ್ತೆ ವಾಹನ ಸಂಚಾರಕ್ಕೆ ಮುಕ್ತವಾಯಿತು.<br /> <br /> ಸುಮಾರು 13 ಗಂಟೆಗಳ ಕಾಲ ಬೆಂಗಳೂರು, ಹಾಸನ, ಮಂಗಳೂರು, ಧರ್ಮಸ್ಥಳಗಳಿಂದ ಬಂದ ನೂರಾರು ವಾಹನಗಳಿಂದ ಸಾವಿರಾರು ಭಕ್ತರು ಅನ್ನ ನೀರಿಗಾಗಿ ಪರದಾಟ ನಡೆಸಿದರೆ, ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಕಾಡನ್ನೆ ಆಶ್ರಯಿಸಿದರು. ವಾಹನದಲ್ಲೇ ಆಸರೆ ಪಡೆದರು.<br /> <br /> ಶುಕ್ರವಾರ ಸಂಜೆ ಸೇತುವೆ ಮುಳುಗಿದಾಗ ಶಾಲಾ ವಿದ್ಯಾರ್ಥಿಗಳು ಮನೆ ಸೇರಲಾಗದೆ ಸುಬ್ರಹ್ಮಣ್ಯದಲ್ಲೇ ರಾತ್ರಿ ಕಳೆದರೆ, ಕೆಲವು ವಿದ್ಯಾರ್ಥಿಗಳು ದುಬಾರಿ ಹಣ ತೆತ್ತು ಪಂಜ ಮಾರ್ಗವಾಗಿ ತೆರಳಿ ತಡ ರಾತ್ರಿ ಮನೆ ಸೇರಿದರು.<br /> <br /> ಎರಡು ವರ್ಷಗಳ ಹಿಂದೆ 16 ಬಾರಿ ಕುಮಾರಧಾರ ಸೇತುವೆ ಮುಳುಗಡೆಗೊಂಡು ಜನರು ಕಷ್ಟ ಅನುಭವಿಸಿದ್ದನ್ನು ಮಾಧ್ಯಮಗಳು ಹಲವು ಬಾರಿ ಎಚ್ಚರಿಸಿದ್ದರೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ ಸೇತುವೆ ಮಾತ್ರ ಮೇಲ್ದರ್ಜೆಗೇರದೆ ಕೂತಿದೆ. ರಾಜಕಾರಣಿಗಳು ಚುನಾವಣಾ ಸಮಯದಲ್ಲಿ `ಸೇತುವೆಯನ್ನು ಮೇಲ್ದರ್ಜೆಗೆ ಏರುಸುತ್ತೇವೆ' ಎಂದು ಆಶ್ವಾಸನೆ ಕೊಡುತ್ತಾರೆ ಹೊರತು ಅನುಷ್ಠಾನ ಮಾತ್ರ ಆಗುತ್ತಿಲ್ಲ.<br /> <br /> <strong>ಬಿಕೋ ಎನ್ನುತ್ತಿರುವ ಸುಬ್ರಹ್ಮಣ್ಯ:</strong> ಸುಬ್ರಹ್ಮಣ್ಯ ಪರಿಸರದ ಘಟ್ಟ ಪ್ರದೇಶ ಹಾಗೂ ಕುಮಾರ ಪರ್ವತದಲ್ಲಿ ನಿರಂತರ ಮಳೆ ಸುರಿದಾಗ ಕುಮಾರಧಾರ ನದಿಯ ಸೇತುವೆ ಮಳುಗಡೆಯಾಗುವುದು. ಈ ಸುದ್ದಿ ಪತ್ರಿಕೆ ಹಾಗೂ ಟಿ.ವಿ ಮಾಧ್ಯಮದಲ್ಲಿ ಪ್ರಸಾರಗೊಂಡಾಗ ದೂರದ ಯಾತ್ರಿಕರು ದೂರವಾಣಿ ಮೂಲಕ ದೇವಸ್ಥಾನಕ್ಕೆ ಬರಬಹುದೇ? ಸೇತುವೆ ಮುಳುಗಡೆಯಾಗಿದೆಯೇ? ಎಂದು ವಿಚಾರಿಸುತ್ತಾರೆ. ಮಳೆಗಾಲದ ಈ ಅವಧಿಯಲ್ಲಿ ದೇಗುಲಕ್ಕೆ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ.<br /> <br /> ಕುಮಾರಧಾರ ಸೇತುವೆ ಮುಳುಗಿದಾಗ ಪತ್ರಿಕೆ ಹಾಗೂ ಟಿ.ವಿ ಮಾಧ್ಯಮದಲ್ಲಿ ದ್ವೀಪವಾದ ಸುಬ್ರಹ್ಮಣ್ಯ ಎಂದು ಸುದ್ದಿ ಬರುತ್ತದೆ. ನೀರು ಕಡಿಮೆಯಾದಾಗ ಯಾರೂ ಸುದ್ದಿ ಮಾಡುವುದಿಲ್ಲ. ಇದರಿಂದಾಗಿ ಕಳೆದ 2 ತಿಂಗಳಿಂದ ಯಾತ್ರಿಕರು ಬಾರದೆ ವ್ಯಾಪಾರವಿಲ್ಲದೆ ಜೀವನ ಸಾಗಿಸಲು ಕಷ್ಟವಾಗುತ್ತಿದೆ.<br /> <strong> -ವೆಂಕಟೇಶ್.ಎಚ್.ಎ. ಹಣ್ಣುಕಾಯಿ ವ್ಯಾಪಾರಿ</strong></p>.<p>ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನಿಂದ ನಮ್ಮ ವಾಹನದಲ್ಲಿ ಕುಟುಂಬ ಸಮೇತರಾಗಿ ಗುಂಡ್ಯ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಬಂದಾಗ ಕುಮಾರಧಾರ ಸೇತುವೆ ಮುಳುಗಡೆಗೊಂಡು ಅಲ್ಲೇ ವಾಹನದಲ್ಲಿ ಕಾಲ ಕಳೆಯಬೇಕಾಯಿತು.<br /> <br /> ರಾತ್ರಿ 10.30 ಗಂಟೆಗೆ ಬಂದವರು ಅನ್ಯಮಾರ್ಗ ತಿಳಿಯದೆ ಕಾಡಿನ ಮಧ್ಯದಲ್ಲೇ ಗಾಳಿ ಮಳೆಗೆ ವಾಹನದಲ್ಲಿ ಮಲಗಿ ಆಸರೆ ಪಡೆದೆವು. ನಮ್ಮಂತಹ ಹಲವು ಕುಟುಂಬಗಳದ್ದು ಇದೇ ಸ್ಥಿತಿ. ದಯವಿಟ್ಟು ಸೇತುವೆಯನ್ನು ಮೇಲ್ದರ್ಜೆಗೆ ಏರಿಸಿ. <br /> <strong>-ದೇವಣ್ಣ ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>