ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2018ರ ನಗರಸಭೆ ಚುನಾವಣೆಸಂದರ್ಭದಲ್ಲಿ ರುಕ್ಮಿಣಿ ತಮ್ಮನ್ನು ಪರಿಶಿಷ್ಟ ಜಾತಿಯವರು ಎಂದು ಪ್ರಮಾಣ ಪತ್ರ ನೀಡಿ ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಆ ಸಂದರ್ಭದಲ್ಲೇಅವರು ಹಿಂದುಳಿದ ವರ್ಗ 1ಕ್ಕೆ ಸೇರಿದವರು ಎಂದುಆಕ್ಷೇಪಿಸಿದ್ದೆ. ನಂತರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದಾಖಲೆಗಳೊಂದಿಗೆ ದಾವೆ ಹೂಡಿದ್ದೆ. ಈ ಬಗ್ಗೆ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ, ಜ.11ರಂದು ರುಕ್ಮಿಣಿ ಅವರ ಶಿಳ್ಳೆಕ್ಯಾತ ಜಾತಿ ಪ್ರಮಾಣಪತ್ರವನ್ನು ರದ್ದು ಪಡಿಸಿ ಆದೇಶಿಸಿದ್ದರು’ ಎಂದು ಹೇಳಿದರು.